ವರದಿ: ವೇಣುಗೋಪಾಲ ಮದ್ಗುಣಿ
ಯಲ್ಲಾಪುರ;ತಾಲೂಕಿನ ನಂದೊಳ್ಳಿ ಗ್ರಾಮ ಪಂಚಾಯತ ಸಭಾಭವನದಲ್ಲಿ ತೋಟಗಾರಿಕಾ ಇಲಾಖೆ, ಗ್ರಾಮ ಪಂಚಾಯತ ನಂದೊಳ್ಳಿ, ಉತ್ತರ ಕನ್ನಡ ಜಿಲ್ಲೆಯ ಸಾವಯವ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಆತ್ಮಾಯೋಜನೆಯ ಅಡಿಯಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ ಹಾಗೂ ಬಾಳೆಕಾಯಿ ಹುಡಿ ತಯಾರಿಸುವ ಕಾರ್ಯಾಗಾರ ನಡೆಯಿತು.ತಾಲೂಕ ಮಾರ್ಕೆಟಿಂಗ ಸೊಸೈಟಿಯ ಅಧ್ಯಕ್ಷರಾದ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಕಾರ್ಯಾಗಾರ ಉದ್ಘಾಟಿಸಿ,ಸ್ಥಳಿಯ ಉತ್ಪನ್ನಗಳನ್ನು ಬಳಸಿ ಸ್ವಾವಲಂಬಿ ಆಗುವ ಕುರಿತು ಪ್ರಯತ್ನಿಸಬೇಕೆಂದರು.
ಈ ಸಂದಭದಲ್ಲಿ ಗ್ರಾ.ಪಂ ಅಧ್ಯಕ್ಷ ನರಸಿಂಹ ಕೋಣೆಮನೆ, ಡಿ.ಶಂಕರ ಭಟ್ಟ,ಪ್ರಮುಖರಾದ ಟಿ
ಆರ್.ಹೆಗಡೆ,ಪಿಡಿಒ ಮಂಜುನಾಥ ಆಗೇರ,ತೋಟಗಾರಿಕೆ ಇಲಾಖೆಯ ಅಧಿಕಾರಿಗಳಾದ ಸತೀಶ ಹೆಗಡೆ,ಸುಭಾಸ ಹೆಗಡೆ,ಕೀರ್ತಿಹೆಗಡೆ,ಭಾಗವಹಿಸಿದ್ದರು.ವಿಷಯತಜ್ಣರಾಗಿ ಡಾ.ಚಂದನ ಕೆ,ಸುಜಯ ಭಟ್ಟ,ಮಮತಾ ಭಟ ಶೆಮೆಮನೆ,ವಸುಂಧರಾ ಕಾನಳ್ಳಿ,ವಿಕಾಸ ಹೆಗಡೆ, ಸಾರ್ವಜನಿಕರು ಉಪಸ್ಥಿತರಿದ್ದರು.
More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ