ಇಡಗುಂದಿ:- ವಿಶ್ವ ಓಝೋನ್ ದಿನಾಚರಣೆ ವಿಶ್ವದರ್ಶನ ಶಿಕ್ಷಣ ಸಂಸ್ಥೇಯ ವಿಶ್ವದರ್ಶನ ಪ್ರೌಢಶಾಲೆ ಇಡಗುಂದಿಯ ಸಮೃದ್ಧಿ ಇಕೋ ಕ್ಲಬ್ ಹಾಗೂ ಬೆಳಕಿನಂದ ಪ್ರತಿಷ್ಠಾನದಡಿಯಲ್ಲಿ ‘ಓಝೋನ್ ದಿನಾಚರಣೆ’ ಯನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮನ್ನು ಶಿಕ್ಷಕರಾದ ವಿಘ್ನೇಶ್ವರ ಕೆ ಗಾಂವಕಾರವರು ಉದ್ಗಾಟಿಸಿದರು. ಮಹೇಶ್ ಗೌಡ ಓಝೋನ್ ಕುರಿತಾದ ಕವನ ವಾಚನ ಮಾಡಿ ಉಪನ್ಯಾಸ ನೀಡಿದರು. ಹೋಲಿ ರೋಜರಿ ಪ್ರೌಢಶಾಲೆಯ ಶಿಕ್ಷಕರಾದ ಎಂ ರಾಜಶೇಖರವರು ಓಝೋನ್ ಪರದೆ, ಹಾಗೂ ಅದರ ಸಂರಚನೆ,ಅದರ ಹಾನಿಗೆ ಕಾರಣವಾಗುತ್ತಿರುವ ಅಂಶಗಳು,ಅದರ ರಕ್ಷಣೆಗೆ ಅನುಸರಿಸಬೇಕಾದ ಕ್ರಮಗಳ ಕುರಿತಾಗಿ ತಿಳಿಸುತ್ತಾ ಮನುಷ ಮೌನವಾಗಿದ್ದರೆ ಪೃಕೃತಿಯನ್ನು ಉಳಿಸಲು ಸಾಧ್ಯ, ನಾನು ಬದಲಾಗಬೇಕು ಹಾಗೆ ಪೃಕೃತಿಗೆ ವಿರುದ್ದವಾದ ಬದುಕನ್ನು ಬದಲಾಯಿಸಿಕೊಳ್ಳಬೇಕು ಎಂಬ ಮನೋಭಾವವನನ್ನು
ಎಲ್ಲರೂ ಅಳವಡಿಸಿಕೊಂಡಾಗ ಸುತ್ತಮುತ್ತಲಿನ ಪರಿಸರವನ್ನು ಉಳಿಸಬಹುದು ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಲತಾ ಕೆ ಹೆಗಡೆ ಸ್ವಾಗತಿಸಿದರು. ಶಿಕ್ಷಕರಾದ ರಾಘವೇಂದ್ರ ಎಸ್ ಹೆಗಡೆ ಇವರು ನಿರ್ವಹಿಸಿ ವಂದಿಸಿದರು.
ವರದಿ: ವೇಣುಗೋಪಾಲ ಮದ್ಗುಣಿ
More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ