April 26, 2024

Bhavana Tv

Its Your Channel

75ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಯಲ್ಲಾಪುರ ಇದರ ಆಶ್ರಯದಲ್ಲಿ ಧ್ವಜಾರೋಹಣವನ್ನು ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿಯವರು ನೆರವೇರಿಸಿ ಮಾತನಾಡಿ ದೇಶಕ್ಕೆ ಸ್ವಾತಂತ್ರ‍್ಯ ಸಿಕ್ಕಿ ಎಪ್ಪತ್ತೇಳನೆ ವರ್ಷದ ಸಂಭ್ರಮಾಚರಣೆಯ ಸಂಭ್ರಮ ನಡೆಸುತ್ತಿರುವುದು ಭಾರತೀಯರು ಹೆಮ್ಮೆ ಪಡುವ ವಿಷಯ. ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ಮೂಲಕ ಪ್ರಗತಿಯನ್ನು ಸಾಧಿಸಿದೆಯೆಂದರು.

ಈ ಸಂದರ್ಭದಲ್ಲಿ ನಾಗರಿಕ ವೇದಿಕೆಯ ಅಧ್ಯಕ್ಷರಾದ ರಾಮು ನಾಯ್ಕ,ಮಲೆನಾಡು ಸೊಸೈಟಿಯ ಅಧ್ಯಕ್ಷರಾದ ಎಮ್.ಆರ್.ಹೆಗಡೆ,ಎಮ್.ಜಿ.ಭಟ್ಟ , ವಿಶ್ರಾಂತ ಶಿಕ್ಷಕರಾದ ಎಸ್.ಎಲ್.ಜಾಲಿಸತ್ಗಿ,ಎಂ.ಮ್.ಶೇಖ,ಮಕ್ಬೂಲ್ ಹಲವಾಯಿಘರ,ಶಾಂತಾರಾAಮ ಹೆಗಡೆ,ಗೋಪಾಲಕೃಷ್ಣ ಕರುಮನೆ, ದಾದಾಫೀರ,ಎಮ್.ಎ.ಮುಗದ್ ಜಾಫರ್,ರಾಘು ಜಡ್ಡಿಪಾಲ.ಸಮಿರ,ನಾಗರಾಜ್,ಕೊರನಳ್ಳಿ,ರಾಜೇಶ್ ಭಟ್ಟ, ಶ್ರೀನಿವಾಸ ಪಟಗಾರ ಮುಂತಾದವರು ಉಪಸ್ಥಿತರಿದ್ದರು

error: