April 27, 2024

Bhavana Tv

Its Your Channel

ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿ ಉಚಿತ ನೇತ್ರ ತಪಾಸಣಾ ಶಿಬಿರ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿ ತಾಲೂಕಿನ ಕಿರವತ್ತಿ ಸಮುದಾಯ ಭವನದಲ್ಲಿ ಗ್ರಾ.ಪಂ.ಕಿರವತ್ತಿ, ವೀರ ಶಿವಾಜಿಸೇನೆ,ಐಕ್ಯತಾ ಸೇವಾ ಸಂಸ್ಥೆಯ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.
ಗ್ರಾಮ ಪಂಚಾಯತ ಅಧ್ಯಕ್ಷರಾದ ಮಂಜುಳಾ ವರದಾನಿ ತಪಾಸಣಾ ಶಿಬಿರ ಉದ್ಘಾಟಿಸಿದರು.
ವಿವಿಧ ಸಂಘಟನೆಗಳ ಪ್ರಮುಖರಾದ ಮಹೇಶ ಪೂಜಾರ ಕಿರವತ್ತಿ,ಮಕ್ಸೂದ್ ಶೇಖ್,ಸುಭಾಸ ಕಳಸೂರಕರ್,ದಯಾನಂದ ನಾರ್ವೆಕರ್,ದತ್ತಾತ್ರಯ ಹೇಂದ್ರೆ,ರಾಮಚAದ್ರ ಮರಾಠಿ,ಗಂಗಾಧರ ನಾಳಕರ್,ಮುಂತಾದವರು ಭಾಗವಹಿಸಿದ್ದರು.
ಹುಬ್ಬಳ್ಳಿಯ ಜಯಪ್ರೀಯ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಡಾ.ವೆಂಕಟ್ರಮಣ ಕಟ್ಟಿ,ಡಾ.ಅನುಶ್ರೀ ಕಣ್ಣಿನ ತಪಾಸಣೆ ಕೈಗೊಂಡರು.ನೂರಾರು ಸ್ಥಳಿಯರು ಶಿಬಿರದಲ್ಲಿ ನೇತ್ರ ತಪಾಸಣೆ ಶಿಬಿರದಲ್ಲಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರು

.

error: