May 19, 2024

Bhavana Tv

Its Your Channel

ಯಲ್ಲಾಪುರ ತಹಶೀಲ್ದಾರ ಕಚೇರಿಯಲ್ಲಿ ಕುವೆಂಪುರವರ ಜನ್ಮದಿನಾಚರಣೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ತಹಶೀಲ್ದಾರ ಕಚೇರಿಯಲ್ಲಿ ಕುವೆಂಪುರವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.ತಹಶೀಲ್ದಾರ ಶ್ರೀ ಕೃಷ್ಣ ಕಾಮಕರ ಮಾತನಾಡಿ ಎಲ್ಲಾ ಧರ್ಮಗಳು ಮನುಷ್ಯ ಧರ್ಮವೇ ಶ್ರೇಷ್ಠ ಎಂದಿದ್ದರು.ಇದನ್ನು ಅರ್ಥೈಸಿಕೊಳ್ಳುವಲ್ಲಿ ಸೋತ ನಾವು ನಮ್ಮದೇ ಶ್ರೇಷ್ಠ ಎನ್ನುತ್ತೇವೆ. ಹೊಸಗನ್ನಡ ಸಾಹಿತ್ಯವನ್ನು ಎಲ್ಲಾ ಪ್ರಕಾರಗಳಲ್ಲೂ ಶ್ರೀಮಂತಗೊಳಿಸಿದ,ವಿಶ್ವಮಾನವ ಸಂದೇಶ ಸಾರಿದ ಯುಗದ ಕವಿ,ಜಗದ ಕವಿ ಕುವೆಂಪುರವರ ನೆನಪು ಅಮರವಾಗಿದೆ.ಪ್ರತಿಯೊಂದು ಮಗುವು ಹುಟ್ಟುತ್ತಲೇ ವಿಶ್ವಮಾನವ,ಬೆಳೆಯುತ್ತಾ ನಾವು ಅದನ್ನು ಅಲ್ಪ ಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ವಿಶ್ವಮಾನವ ನನ್ನಾಗಿ ಮಾಡುವುದೇ ವಿದ್ಯೆಯ ಮುಖ್ಯ ಕರ್ತವ್ಯಗಳಾಗಬೇಕು ಎಂದು ಜಗತ್ತಿಗೆ ಹೇಳಿ ಸಮಾನತೆಯ ಸಂದೇಶ ಸಾರಿದ್ದು ಕುವೆಂಪುರವರಿಗೆ ಸಲ್ಲುತ್ತದೆಂದರು.ಈ ಸಂದರ್ಭದಲ್ಲಿ ಗ್ರೇಡ 2 ತಹಶೀಲ್ದಾರ ಸಿ.ಜಿ.ನಾಯ್ಕ, ಶ್ರೀಧರ ಮಡಿವಾಳ,ಜ್ಯೋತಿ ನಾಯ್ಕ,ಗೀತಾ ಜಾದವ್ ಮುಂತಾದವರು ಉಪಸ್ಥಿತರಿದ್ದರು.

error: