ವಿಜಯಪೂರ ; ಜಿಲ್ಲೆಯ ಸಿಂದಗಿ ತಾಲೂಕೀನ ಆಲಮೇಲ ಪಟ್ಟಣದ ಸರಕಾರಿ ಮಾದರಿ ಪ್ರಾಥಮೀಕ ಶಾಲೆಯ ಶಿಕ್ಷಕರಾದ ಎಂ ಎಂ ಮುಲ್ಲಾ ಅವರು ಕೊರೊನಾ ಹಾಡನ್ನು ಬರೆದು ಫೇಸ್ ಬುಕ್ಕ್ ನಲ್ಲಿ ಹರಿಬಿಟ್ಟಿದ್ದರು.ಕೊರೊನಾ ೨ನೇ ಅಲೆ ತೀವ್ರವಾಗುತ್ತಿರುವ ಹಿನ್ನಲೇಯಲ್ಲಿ ಕೊರೊನಾ ಕರಾಳತೆ ಕುರಿತು ಗಜೇಂದ್ರಗಡದ ಪೊಲೀಸರು ಜನಪದ ಶೈಲಿಯ ಹಾಡನ್ನು ಹಾಡುವ ಮೂಲಕ ಸಾರ್ವಜನಿಕರಲ್ಲಿ ಜಾಗ್ರತಿ ಮೂಡಿಸುತ್ತಿದ್ದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.ಸಾರ್ವಜನಿಕರು ಮಾಸ್ಕ ಧರಿಸಿ ಸ್ಯಾನಿಟೈಜರ್ ಬಳಸಿ ಸಾಮಾಜಿಕ ಜವಾಬ್ದಾರಿ ಆರೊಗ್ಯ ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸದಿದ್ದರೆ ಆಗುವ ಅವಘಡ ಕುರಿತು ಮನಮುಟ್ಟವಂತೆ ತಮ್ಮ ಹಾಡಿನ ಮೂಲಕ ಅರಿವು ಮೂಡಿಸುತ್ತಿದ್ದಾರೆ ಸ್ಥಳಿಯ ಪೊಲೀಸ್ ಠಾಣೆಯ ಎಎಮ್ ಎಚ್ .ಎಲ್.ಭಜಂತ್ರಿ ಹಾಗೂ ದಾದಾಖಲಂದರ ಆಶೆಖಾನ ಇಲ್ಲೀನ ಶ್ರೀಗುರು ಪುಟ್ಟರಾಜ ಸಂಗೀತಧಾಮ ಸ್ಟುಡಿಯೊಂದರಲ್ಲಿ ಹಾಡಿದ್ದು ಅದು ಈಗ ಫೇಸ್ ಬುಕ್ಕ್. ವಾಟ್ಸಾಪ್.ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಖತ್ ವೈರಲ್ ಆಗಿದೆ.
ವರದಿ. ಬಿ ಎಸ್ ಹೊಸೂರ.
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ