ಇಂಡಿ ; ಅಕ್ರಮವಾಗಿ ಇಸ್ಪೀಟ್ ಆಟಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಕ್ಕೆ ಯುವಕನ ಮೇಲೆಯೆ ಇಂಡಿ ಗ್ರಾಮೀಣ ಪೊಲೀಸ್ ಠಾಣಾ ಪಿಎಸ್ಐ ಯೊಬ್ಬರು ಬಾಯಲ್ಲಿ ಬೂಟ್ ಇಟ್ಟು ಹಲ್ಲೆಗೈದಿರುವ ಆರೋಪ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ನಡೆದಿದೆ.
ಇಂಡಿ ನಿವಾಸಿ ಸಂತೋಷ ನಂದ್ಯಾಳ ಹಲ್ಲೆಗೊಳಗಾದ ಯುವಕ. ಇನ್ನು ಇಂಡಿ ಗ್ರಾಮೀಣ ಪೊಲೀಸ ಠಾಣಾ ಪಿ ಎಸ್ ಐ ಯುವಕನ ಬಾಯಲ್ಲಿ ಬೂಟ್ ಇಟ್ಟು ಹಲ್ಲೆ ಮಾಡಿದ್ದಾರೆ. ಇದರೊಂದಿಗೆ ಠಾಣಾ ಬಿಟ್ ಪೊಲೀಸ ಹಾಗೂ ಖಾಸಗಿ ವ್ಯಕ್ತಿ ಯಲಿಗಾರ ಕೂಡ ಮನಬಂದAತೆ ಹಲ್ಲೆಗೈದು ಹೊರವಲಯದಲ್ಲಿ ಸಂತೋಷನನ್ನು ಎಸೆದು ಹೋಗಿದ್ದಾರೆ ಎಂದು ಹಲ್ಲೆಗೊಳಗಾದ ಸಂತೋಷ ತಂದೆ ಗುರುಲಿಂಗಪ್ಪ ಆರೋಪ ಮಾಡಿದ್ದಾರೆ. ಇನ್ನು ಕೇಸ್ ನೀಡಲು ಠಾಣೆಗೆ ಹೋದ್ರೇ ನಮ್ಗೆ ಧಮ್ಕಿ ನೀಡಿ ಕಳಿಸಿದ್ದಾರೆ ಎಂದು ಗುರುಲಿಂಗಪ್ಪ ನಂದ್ಯಾಳ ಹೇಳಿದರು. ಈಗಾಗಲೇ ನನ್ನ ಮಗನ ಆರೋಗ್ಯ ಕಾಪಾಡಲು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡುಸುತ್ತಿದ್ದೇನೆ ಎಂದರು.
ಇನ್ನು ನಿನ್ನೆಯೇ ಹುಬ್ಬಳ್ಳಿಯ ಪಿಎಸ್ಐ ಹಲ್ಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪೊಲೀಸ ಹಲ್ಲೆ ಮಾಡಿರುವುದು ಬೆಳಕಿಗೆ ಬಂದಿದೆ. ಇನ್ನಾದ್ರೂ ಗೃಹ ಇಲಾಖೆಯ ಸಚಿವರು ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.
ವರದಿ ; ಬಿ ಎಸ್ ಹೊಸುರ
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ