April 28, 2024

Bhavana Tv

Its Your Channel

ಆಧಾರ್ ಕಾರ್ಡ್ ನೋಂದಣಿ ಕೇಂದ್ರಗಳಲ್ಲಿ ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ

ವಿಜಯಪುರದಲ್ಲಿ ವಿವಿಧ ಆಧಾರ್ ಕಾರ್ಡ್ ನೋಂದಣಿ ಕೇಂದ್ರಗಳಲ್ಲಿ ಕೆಲವೊಂದು ಸಿಬ್ಬಂದಿ ಅನಾವಶ್ಯಕವಾಗಿ ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದು, ಕೂಡಲೇ ಅವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದವರು.

ಜಿಲ್ಲಾಧ್ಯಕ್ಷ ಶಕ್ತಿಕುಮಾರ ಉಕುಮನಾಳ ಮಾತನಾಡಿ ಆಧಾರ್ ಕಾರ್ಡ್ ದಿಂದ ರೈತರು ಬೆಳೆ ಸಾಲ ಪಡೆಯಲು ಬೆಳೆ ಪರಿಹಾರ ಪಡೆಯಲು ಇನ್ನೂ ಜಾತಿ ಪ್ರಮಾಣ ಪತ್ರ ಪಡೆಯಲು ಬ್ಯಾಂಕ್ ಇನ್ನೀತರ ಕೆಲಸ ಕಾರ್ಯಗಳಿಗೆ ಆಧಾರ್ ಕಾರ್ಡ್ ಮುಖ್ಯವಾಗಿರುತ್ತದೆ. ವಿಜಯಪುರ ನಗರದ ಹಳೆ ತಹಶಿಲ್ದಾರ ಆಫೀಸ್ ಹತ್ತಿರ ಆಧಾರ್ ಕಾರ್ಡ್ ನೊಂದಣಿ ಮಾಡುವ ಕೆಲವೊಂದು ಹೊರಗುತ್ತಿಗೆ ಸಿಬ್ಬಂದಿಗಳು ಸಾರ್ವಜನಿಕರಿಂದ ಹೆಚ್ಚಿನ ಹಣ ಪಡೆಯುವ ಸಿಬ್ಬದಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸುಜಾತಾ ಸಿಂಜಿ,ಅಮಿತಾ ಪಟೇಲ್,ವೀರೇಶ್ ತಂಬಾಕೆ, ತುಕಾರಾಮ್ ಪೂಜಾರಿ,ಪವಿತ್ರ ಸಿಂಧೆ,ಇತರರು ಉಪಸ್ಥಿತರಿದ್ದರು.

ವರದಿ ಬಿ ಎಸ್ ಹೊಸೂರ.

error: