May 13, 2024

Bhavana Tv

Its Your Channel

ಮನೆ-ಮನೆಗೆ ಉಚಿತ ಕೋವಿಡ್ ಲಸಿಕೆ ಅಭಿಯಾನಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಚಾಲನೆ

ವಿಜಯಪುರ: ಪ್ರಧಾನಿ ನರೇಂದ್ರ ಮೋದಿಜಿಯವರ ಕರೆ ಮೇರೆಗೆ ನಗರಾದ್ಯಂತ ಮನೆ-ಮನೆಗೆ ಉಚಿತ ಕೊವಿಡ್ ಲಸಿಕೆ ಅಭಿಯಾನವನ್ನು ಹಮ್ಮಿಕೊಂಡಿದ್ದು, ಅದರಂತೆ ಇಂದು, ವಿಜಯಪುರ ನಗರದ ವಾರ್ಡ ನಂ.೧೨ ರ ಆಶ್ರಮ ಹತ್ತಿರದ ಅಕ್ಕಿ ಕಾಲನಿಯ ಶ್ರೀ ಗಜಾನನ ದೇವಸ್ಥಾನ ಆವರಣದಲ್ಲಿ ಉಚಿತ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಹರಿ ಗೊಳಸಂಗಿ, ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾ.ಜಯಶ್ರೀ ಮಸಳಿ, ಡಾ.ಕವಿತಾ ದೊಡ್ಡಮನಿ, ಪಾಲಿಕೆ ಮಾಜಿ ಸದಸ್ಯರಾದ ಎಂ.ಎಸ್.ಕರಡಿ, ಮುಖಂಡರಾದ ಚಂದ್ರು ಚೌಧರಿ, ಪ್ರಕಾಶ ಚವ್ಹಾಣ, ಪ್ರಶಾಂತ ದೇಸಾಯಿ, ವಿಜು ಗಚ್ಚಿನಕಟ್ಟಿ, ಬಾಬು ಶಿರಶ್ಯಾಡ, ಮಲ್ಲು ಪಟ್ಟಣಶೆಟ್ಟಿ, ಲಕ್ಷ್ಮಣ ಕುಂಬಾರ, ರಾಜಶೇಖರ ಭಜಂತ್ರಿ, ನಾಗರಾಜ ಮುಳವಾಡ, ಪ್ರವೀಣ ಬೆಳ್ಳೆಣವರ, ಸಚೀನ ಕೆಂಬಾವಿ, ಲೋಹಿತ್ ರೆಡ್ಡಿ, ಅರುಣ ಅಳ್ಳಗಿ ಸೇರಿದಂತೆ ಕಾಲನಿಯ ಮುಖಂಡರು, ನಾಗರಿಕರು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು, ಭಾಗವಹಿಸಿದ್ದರು.
ವರದಿ ಬಿ ಎಸ್ ಹೊಸೂರ.

error: