May 18, 2024

Bhavana Tv

Its Your Channel

ತುಂಬಿದ ಚಿಕ್ಕಗಲಗಲಿ ಬ್ಯಾರೇಜ್‌ಗೆ ಶಾಸಕ ಎಂ.ಬಿ.ಪಾಟೀಲ ಬಾಗಿನ ಅರ್ಪಣೆ

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಚಿಕ್ಕಗಲಗಲಿಯಲ್ಲಿ ಕೃಷ್ಣಾನದಿಗೆ ಅಡ್ಡಲಾಗಿ ೫೪ ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಬ್ರಿಡ್ಜ್ ಬಾಂದಾರ ತುಂಬಿ ನಿಂತಿರುವ ಹಿನ್ನೆಲೆಯಲ್ಲಿ ಶಾಸಕ ಎಂಬಿ ಪಾಟೀಲ್ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.

ಬಳಿಕ ಮಾತನಾಡಿದ ಅವರು ೨೦೧೪ ರಲ್ಲಿ ಈ ಭಾಗದ ರೈತ ಮುಖಂಡರು ಚಿಕ್ಕಗಲಗಲಿಯಲ್ಲಿ ಹೊಸ ಬ್ಯಾರೆಜ್ ನಿರ್ಮಿಸಲು ಬೇಡಿಕೆ ಇಟ್ಟಿದ್ದರು, ಟ್ರಿಬುನಲ್ ಹಾಗೂ ನ್ಯಾಯಾಲಯಗಳ ವ್ಯಾಜ್ಯದ ತೊಂದರೆ ಇರುವುದರಿಂದ ಹೊಸ ಬ್ಯಾಬೇಜ್ ನಿರ್ಮಿಸುವುದು ಅಸಾಧ್ಯವಾಗಿತ್ತು ಎಂದರು

೫೦ ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಿದ ಬ್ಯಾರೇಜ್ ಸುಸ್ಥಿತಿಯಲ್ಲಿ ಇರಲಿಲ್ಲ.ಅದನ್ನು ಎತ್ತರಿಸಲು ತಾಂತ್ರಿಕ ತೊಂದರೆಯೂ ಕೂಡ ಇತ್ತು.ಪಕ್ಕದ ತೆಲಂಗಾಣದಲ್ಲಿ ಜಾಕೆಟಿಂಗ್ ಮಾದರಿಯಲ್ಲಿ ಹಾಲಿ ಬ್ಯಾರೇಜ್ ಅನ್ನು ಬಲಡಡಿಸಿ ಎತ್ತರಿಸುವ ಕಾಮಗಾರಿ ಮಾಡಿದ್ದರು. ಅದೇ ಮಾದರಿಯನ್ನು ಇಲ್ಲಿ ಪ್ರಯೋಗಿಸಿ ಹಿಂದಿನ ಬ್ಯಾರೇಜ್ ಅನ್ನು ಬಲಪಡಿಸಿ ಎತ್ತರಿಸಲಾಗಿದೆ.ಇದು ಕರ್ನಾಟಕದ ಮಟ್ಟಿಗೆ ಹೊಸ ಪ್ರಯೋಗ ಎಂದರು.

ಜನಪ್ರತಿನಿಧಿಗಳಿಗೆ ಜನ ಅಧಿಕಾರದ ಅವಕಾಶ ಕೊಟ್ಟಾಗ ಇಚ್ಚಾಶಕ್ತಿ ಪ್ರದರ್ಶಿಸಿ ಜನರ ಅಭಿವೃದ್ಧಿಗಾಗಿ ಶ್ರಮಿಸಲು ಮುಂದಾಗಬೇಕು ಎಂದರು

ವರದಿ ಬಿ ಎಸ್ ಹೊಸೂರ.

error: