May 18, 2024

Bhavana Tv

Its Your Channel

ಪ್ರೇಮಿಗಳಿಬ್ಬರ ಭೀಕರ ಹತ್ಯೆ ನಡೆಸಿದ ಐದು ಜನ ಆರೋಪಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ವಿಜಯಪುರ ಪೊಲೀಸರು.

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸಲಾದಹಳ್ಳಿ ಗ್ರಾಮದಲ್ಲಿ ನಡೆದಿದ್ದ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬAಧಿಸಿದoತೆ ಯುವತಿಯ ತಂದೆ ಸೇರಿದಂತೆ ಐದು ಜನ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಮರ್ಯಾದಿ ಹತ್ಯೆಯಲ್ಲಿ ಮೃತಪಟ್ಟ ಯುವತಿಯ ತಂದೆ ಬಂದಗಿಸಾಬ ತಂಬಡ್ (೫೦), ಸಹೋದರ ದಾವಲ್ ಪಟೇಲ (೨೦), ಅಳಿಯಂದಿರಾದ ಅಲ್ಲಾ ಪಟೇಲ್ (೨೯) ರಫೀಕ್ (೨೪) ಮಾವನಾದ ಲಾಳೆಸಾಬ ಅವರನ್ನು ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬAಧಿಸಿದ ಐದು ಜನರನ್ನು ಶನಿವಾರದಂದು ಜಿಲ್ಲಾ ಸೆಷನ್ಸ್ ಕೋರ್ಟಿಗೆ ಹಾಜರುಪಡಿಸಿದರು.

ಪ್ರಕರಣಕ್ಕೆ ಸಂಬAಧಿಸಿದAತೆ ಇಂಡಿ ಡಿವೈಎಸ್ಪಿ ಶ್ರೀಧರ್ ದೊಡ್ಡಿ ಅವರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿದ್ದರು. ಪ್ರಕರಣಕ್ಕೆ ಸಂಬAಧಿಸಿದ ಐದು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರ ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ. ಈ ಸಂಬAಧ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ ಅವರು ರಚಿಸಿದ ತಂಡದಲ್ಲಿದ್ದ ಚಡಚಣ ಸಿಪಿಐ ಎ ಎಮ್ ಚಿದಂಬರ, ಸಿಂದಗಿ ಸಿಪಿಐ ಎಚ್‌ಎಮ್ ಪಟೇಲ್, ಕಲಕೇರಿ ಪಿಎಸ್‌ಐ ಗಂಗೂ ಬಿರಾದಾರ, ದೇವರಹಿಪ್ಪರಗಿ ಪಿಎಸ್‌ಐ ರವಿ ಯಡವಣ್ಣವರ, ಆಲಮೇಲ ಪಿಎಸ್‌ಐ ಸುರೇಶ್ ಗಡ್ಡಿ, ಪೊಲೀಸ್ ಸಿಬ್ಬಂದಿಗಳಾದ ಬಸವರಾಜ ಎಳಗಿ, ಮಲ್ಲಿಕಾರ್ಜುನ ಕತ್ತಿ, ಹರಿಶ ದೊಡಮನಿ, ವೀರೆಶ ಬಿರಾದಾರ, ಮಲ್ಲಿಕಾರ್ಜುನ ಹಂದ್ರಾಳ, ರಾಜಕುಮಾರ್ ಬಿರಾದಾರ, ಪ್ರವಿಣ ನಾಗರಾಳ, ಸಿದ್ದು ಝಲಪಿ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ ; ಬಿ ಎಸ್ ಹೊಸೂರ.

error: