ವಿಜಯಪೂರ ; ಅಕ್ರಮವಾಗಿ ತನ್ನ ಜಮೀನಿನಲ್ಲಿ ಗಾಂಜಾ ಬೆಳೆಯನ್ನು ಬೆಳೆದಿದ್ದ ಓರ್ವನನ್ನು ಬಂದಿಸಿ ೩.೨೦,೦೦೦ ರೂಪಾಯಿ ಮೌಲ್ಯದ ೫೦ಕೆಜಿ ೨೦೦ ಗ್ರಾಮ ಗಾಂಜಾ ಗಿಡಗಳನ್ನು ವಿಜಯಪೂರ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ರು ವಶಪಡಿಸಿಕೊಂಡಿದ್ದಾರೆ. ವಿಜಯಪೂರ ಜಿಲ್ಲೆಯ ನಾಗಠಾಣ ಗ್ರಾಮದ ತನ್ನ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿರುವ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ೫೦ಕೆಜಿ ೨೦೦ ಗ್ರಾಂ ಗಾಂಜಾ ಮತ್ತು ಮಂಜುನಾಥ ತಂದೆ ಕಾಶಿನಾಥ ಪಾಟೀಲ (೩೫) ನನ್ನು ಬಂದಿಸಿ ಎನ್ ಡಿ ಪಿ ಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಈ ದಾಳಿ ಪ್ರಕರಣದಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಸಿಬ್ಬಂದಿಯನ್ನು ವಿಜಯಪೂರ ಪೊಲೀಸ್ ಅಧಿಕ್ಷಕ ಅನುಪಮ ಅಗರವಾಲ್ ಶ್ಲಾಘಿಸಿ ಸೂಕ್ತ ಬಹಮಾನ ಘೊಷಿಸಿದ್ದಾರೆ.
ವರದಿ ; ಬಿ ಎಸ್ ಹೊಸೂರ.
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ