May 18, 2024

Bhavana Tv

Its Your Channel

ಬಿ ಎಸ್ ವೈ ಅವರಿಂದ ನನಗೆ ಸಿಎಂ ಸ್ಥಾನ ತಪ್ಪಿದೆ -ಬಸನಗೌಡ ಪಾಟೀಲ ಯತ್ನಾಳ್

ವಿಜಯಪೂರ: ಯಡಿಯೂರಪ್ಪ ಅವರಿಂದಾಗಿ ನನಗೆ ಮುಖ್ಯಮಂತ್ರಿ ಸ್ಥಾನ ತಪ್ಪಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ಪ್ರಾಣ ಹೋದರೂ ಪರವಾಗಿಲ್ಲ ಯತ್ನಾಳ್‌ರನ್ನು ಸಿಎಂ ಮಾಡಬಾರದು ಎಂಬ ಷರತ್ತನ್ನು ಯಡಿಯೂರಪ್ಪ ಹಾಕಿದ್ದರು. ಹಾಗಾಗಿ ನಾನು ಸಿಎಂ ಆಗಲಿಲ್ಲ ಎಂದಿದ್ದಾರೆ.

ಇAದು ವಿಜಯಪುರ ನಗರದಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ
ಬಿ ಎಸ್ ವೈ ಹೇಳಿದವರನ್ನೇ ಬಿಜೆಪಿ ವರಿಷ್ಠರು ಮುಖ್ಯಮಂತ್ರಿ ಮಾಡಿದ್ದಾರೆ. ಮುಂದೆ ಯಡಿಯೂರಪ್ಪ ಹೇಳಿದ್ದೇ ಎಲ್ಲವೂ ಆಗೋದಿಲ್ಲ ಎಂದು ಕಿಡಿಕಾರಿದ್ದಾರೆ.ಇನ್ನು,ನನಗೆ ಮಂತ್ರಿಗಿರಿಗಾಗಿ ದೆಹಲಿಗೆ ಹೋಗಿ ಲಾಬಿ ಮಾಡುವ ಅವಶ್ಯಕತೆ ಇಲ್ಲ. ಸಚಿವ ಸಂಪುಟದಲ್ಲಿ ವಿಜಯಪುರ ಜಿಲ್ಲೆಯನ್ನು ಕಡೆಗಣಿಸಿದ್ರೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಆಗುತ್ತದೆ ಎಂದು ಎಚ್ಚರಿಸಿದ್ದಾರೆ

ವರದಿ. ಬಿ ಎಸ್ ಹೊಸೂರ.

error: