May 18, 2024

Bhavana Tv

Its Your Channel

ಭೀಮಾತೀರದ ಹಂತಕ ಚಡಚಣ ಕೇಸ್ ಗೆ ಬಿಗ್ ಟ್ವಿಸ್ಟ್.

ಭೀಮಾತೀರದ ನಟೋರಿಯಸ್ ಹಂತಕ ಧರ್ಮರಾಜ್ ಚಡಚಣ ಹಾಗೂ ಸಹೋದರ ಗಂಗಾಧರ ಚಡಚಣ ಹತ್ಯೆಯ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ವಿಜಯಪುರ ಜಿಲ್ಲೆಯ ಚಡಚಣ ಹತ್ತಿರದ ಕೊಂಕಣಗಾAವ್ ನಲ್ಲಿ ನಡೆದ ಚಡಚಣ ಎನ್ಕೌಂಟರ್ ಕೇಸ್ ನಲ್ಲಿ ಮತ್ತೊಂದು ಟ್ವಿಸ್ಟ್ ಬಹಿರಂಗ ಕೊಂಡಿದ್ದು, ಇಂಡಿ ಜೆಎಂಎಫ್ ಸಿ ಕೋರ್ಟ್ನಿಂದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಿಆರ್‌ಪಿಸಿ ೨೦೯ ಅಡಿಯಲ್ಲಿ ಇಂಡಿ ಜೆಎಂಎಫ್‌ಸಿ ನ್ಯಾಯಾಧೀಶರಾದ ಅಲ್ತಾಫ್ ಖಂಡಾವಿ ವರ್ಗಾವಣೆ ಮಾಡಿ ಆದೇಶ ಮಾಡಿದ್ದಾರೆ. ಈಗಾಗಲೇ ಚಡಚಣ ಹತ್ಯೆಯ ಎರಡು ಪ್ರಕರಣದಲ್ಲಿ ಒಟ್ಟು ೧೭ ಆರೋಪಿಗಳ ವಿರುದ್ಧ ಚಡಚಣ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ್ ಮುಂದಿನ ದಿನಗಳಲ್ಲಿ ಚಡಚಣ ಸಹೋದರರ ಹತ್ಯೆ ಕೇಸ್ ಕುರಿತು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯಲಿದೆ ಎಂದು ಸರ್ಕಾರಿ ವಕೀಲರಾದ ಐ ಕೆ ಗಚ್ಚಿನಮಹಲ್ ಮಾಹಿತಿ ನೀಡಿದರು.

ರದಿ ಬಿ ಎಸ್ ಹೊಸೂರ.

error: