May 18, 2024

Bhavana Tv

Its Your Channel

ಗೋಲಗೇರಿಯಲ್ಲಿ ಬಸ್ಸ್ ನಿಲ್ದಾಣದಿಂದ ಗೋಲ್ಲಾಳೇಶ್ವರ ಗುಡಿಯ ವರೆಗೆ ಹದಗೆಟ್ಟು ಹೋದ ರಸ್ತೆ

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿಯಲ್ಲಿ ಮುಖ್ಯ ಬಜಾರ್ ನ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಇದು ಬಸ್ಸ್ ನಿಲ್ದಾಣದಿಂದ ಗೋಲ್ಲಾಳೇಶ್ವರ ಗುಡಿಗೆ ಹೋಗುವ ರಸ್ತೆ ಆಗಿದ್ದು, ಇಲ್ಲಿ ಜನರು ಸಂಚರಿಸ ಬೇಕಾದರೆ ಜನರು ತಮ್ಮ ಜೀವನವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡ ಬೇಕಾದ ಪರಿಸ್ಥಿತಿಯನ್ನು ನಿರ್ಮಾಣವಾಗಿದೆ.

ಇದಕ್ಕೆ ಸಂಬAದಪಟ್ಟ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರುಗಳು, ಸದಸ್ಯರುಗಳೆಲ್ಲಾ ಕಣ್ಣು ಮುಚ್ಚಿ ಕುಳಿತ ಕೊಂಡಿದ್ದಾರೆ. ಎಂದು ಸ್ಥಳೀಯ ಗ್ರಾಮಸ್ಥರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಇದಕ್ಕೆ ಸಂಬAದಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುತ್ತಾರಾ ಇಲ್ವಾ ಅಂತ ಕಾದು ನೋಡಬೇಕಾಗಿದೆ.

ವರದಿ ಬಿ ಎಸ್ ಹೊಸೂರ

error: