ಇಂಡಿ: ಪ್ರತಿ ವರ್ಷದಂತೆ ಈ ಬಾರಿಯೂ ಕೂಡಾ ಶ್ರಾವಣ ಮಾಸದ ನಿಮಿತ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಸ್ವಚತಾ ಅಭಿಯಾನ ಕಾರ್ಯಕ್ರಮ ವಿಜಯಪೂರ ಜಿಲ್ಲೆಯ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಶ್ರೀ ರಾಚೋಟೇಶ್ವರ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮವನ್ನು ತಡವಲಗಾ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸದಸ್ಯರಾದ ಶ್ರೀಮತಿ ಆಸ್ಮಭಾನು ಉಸ್ಮಾನ್ ಕಸ್ಸಾಬ ಅವರು ಚಾಲನೆ ನೀಡಿದರು.ನಂತರ ಮಾತನಾಡಿದ ಅವರು ನಾನು ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಗ್ರಾಮದ ಮಹಿಳೆಯೊಂದಿಗೆ ಕೂಡಿ ಗ್ರಾಮದ ದೇವಾಲಯಗಳನ್ನು ಸ್ವಚಗೊಳ್ಳಿಸುವ ಕಾರ್ಯದಲ್ಲಿ ತೊಡಗುತ್ತಿದ್ದೆ.ಆದರೆ ದೇವರ ಆಶೀರ್ವಾದದಿಂದ ಈ ಬಾರಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ ಎಂದು ಹೇಳಿದರು.ನಂತರ ಮಾತನಾಡಿದ ಸಂಘದ ಸದಸ್ಯರಾದ ಭಾರತಿ ಬಡಿಗೇರ ನಾವು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅವರ ಕನಸಿನಂತೆ ಗ್ರಾಮವನ್ನು ಸ್ವಚ್ಛ ಗೊಳಿಸುವ ಕಾರ್ಯದಲ್ಲಿ ನಾವು ನಿರತರಾಗಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಸ್ಮಭಾನು ಕಸ್ಸಾಬ., ಭಾರತಿ ಬಡಿಗೇರ. ಜ್ಯೋತಿ ಇಂಡಿ, ಶಾಂತಾಬಾಯಿ ಬಡಿಗೇರ,ಬೇಬಿ ಅತ್ತಾರ, ಶೋಭಾ ಮಸಳಿ, ಶೋಭಾ ಇಂಡಿ, ಅಂಬಿಕಾ ಬಡಿಗೇರ, ಲಕ್ಷ್ಮೀಬಾಯಿ ಮಿರ್ಜಿ, ಶೋಭಾ ರಾಂಪುರ,ಬೌನೇಶ್ವರಿ ಇಂಡಿ,ಸೈನಾಜ ಮನಿಯಾರ, ರಾಜಶ್ರೀ ಚವಡಿಹಾಳ, ಮಾದೇವಿ ತೇಲಿ ಸೇರಿದಂತೆ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ವರದಿ ಬಿ ಎಸ್ ಹೊಸೂರ
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ