April 26, 2024

Bhavana Tv

Its Your Channel

ಸಮಗ್ರ ನೀರಾವರಿಗೆ ಆಗ್ರಹಿಸಿ ಇಂಡಿ ತಾಲೂಕು ಬಂದ್…

ವಿಜಯಪುರ/ಇಂಡಿ

ಸಮಗ್ರ ನೀರಾವರಿ ಹಾಗೂ ಗುತ್ತಿ ಬಸವಣ್ಣ, ರೇವಣಸಿದ್ದೇಶ್ಚರ ಏತ ನೀರಾವರಿ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳ ಆರಂಭಕ್ಕೆ ಒತ್ತಾಯಿಸಿ ಜೆಡಿಎಸ್ ನವರು ಹಮ್ಮಿಕೊಂಡಿದ್ದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಬಂದ್ ಯಶಸ್ವಿಯಾಗಿದೆ.

ಜೆಡಿಎಸ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಇಂಡಿ ಬಂದ್’ಗೆ ಪಕ್ಷಾತೀತವಾಗಿ ಜನತೆ ಸಾತ್ ನೀಡಿದ್ದು, ಜಿಲ್ಲೆಯ ಇಂಡಿ ರೈತರು ಹಾಗೂ ಇಂಡಿ ತಾಲೂಕಾ ಜೆಡಿಎಸ್ ಘಟಕದ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸ್ಥಳೀಯರು ಕೂಡ ಸಂಪೂರ್ಣ ಅಂಗಡಿ ಮುಂಗಟ್ಟಗಳು ಬಂದ್ ಮಾಡುವ ಮೂಲಕ ಬೆಂಬಲ ನೀಡಿದರು. ಅಲ್ಲದೇ, ನಮ್ಮ ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು. ನಮ್ಮ ಬೇಡಿಕೆ ಆದಷ್ಟು ಬೇಗನೆ ಪೂರ್ಣಗೊಳಿಸಬೇಕು. ಇಲ್ಲದೇ ಹೋದ್ರೇ ಮುಂದಿನ ದಿನಗಳಲ್ಲಿ ಮತ್ತೇ ಉಗ್ರವಾದ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ರವಿಕಾಂತ್ ಪಾಟೀಲ, ವಿಧಾನ್ ಪರಿಷತ್ ಮಾಜಿ ಸದಸ್ಯರಾದ ಬಿ.ಜಿ.ಪಾಟೀಲ
ತಾಲೂಕು ಜೆಡಿಎಸ್ ಪಕ್ಷದ ಅದ್ಯಕ್ಷ ಮತ್ತು ಹೋರಾಟದ ನೇತೃತ್ವ ವಹಿಸಿದ ಬಿ.ಡಿ.ಪಾಟೀಲ ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.

ವರದಿ ; ಬಿ ಎಸ್ ಹೊಸೂರ. ಇಂಡಿ

error: