April 26, 2024

Bhavana Tv

Its Your Channel

ಶ್ರಾವಣ ಮಾಸದ ಪ್ರಯುಕ್ತ ಶ್ರೀ ಬ್ರಹ್ಮದೇವರ ಜಾತ್ರೆಯು ಅದ್ದೂರಿಯಾಗಿ ಜರುಗಿತು.

ವಿಜಯಪೂರ : ಜಿಲ್ಲೆಯ ಸಿಂದಗಿ ತಾಲೂಕಿನ ತೋಂಟಾಪುರ ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಬ್ರಹ್ಮದೇವರ ಜಾತ್ರಾ ಮಹೊತ್ಸವವು ಗ್ರಾಮದ ಸಕಲ ಸದ್ಬಭಕ್ತರು ಸರಳವಾಗಿ ಸಂಭ್ರಮದಿoದ ಜಾತ್ರೆಯು ಜರುಗಿತು. ಬ್ರಹ್ಮದೇವರ ಪಲ್ಲಕ್ಕಿ ಹಾಗೂ ಲಕ್ಷ್ಮಿದೇವಿಯ ಪಲ್ಲಕ್ಕಿ ಗ್ರಾಮದ ತುಂಬೆಲ್ಲಾ ಕುಂಭ ಮೇಳ ಆರತಿ ಸಕಲವಾದ್ಯಗಳೊಂದಿಗೆ ಡೊಳ್ಳು ಕುಣಿತ ವಾಲಗ ಮೇರವಣಿಗೆ ನಡೆಯಿತು.ನಂತರ ಹೊಳೆಗೆ ಹೋಗಿ ಗಂಗಸ್ಥಾನ ಮಾಡಿಕೊಂಡು ಬ್ರಹ್ಮದೇವರ ದೇವಸ್ಥಾನದಲ್ಲಿ ತಂಗಿದವು ಮೇರವಣಿಗೆಯಲ್ಲಿ ಸುತ್ತ ಮುತ್ತಲಿನ ಗ್ರಾಮದ ಭಕ್ತರು ಆಗಮಿಸಿ ದೇವರ ಆಶಿರ್ವಾದ ಪಡೆದುಕೊಂಡರು. ನಂತರ ಗ್ರಾಮದ ಕಲಾವಿದರಿಂದ ಡೊಳ್ಳಿನ ಪದಗಳು ಜರುಗಿದವು. ಈ ಸಂದರ್ಭದಲ್ಲಿ ದೇವಸ್ಥಾನದ ಕಮಿಟಿಯವರಾದ. ಕೆಂಚಪ್ಪ ಬಿರಾದಾರ. ಯಲ್ಲಪ್ಪ ಬಿರಾದಾರ. ಮಾಳಪ್ಪ ಬಿರಾದಾರ. ದಶರತ ಹಂಚನಾಳ.ಶoಕ್ರೆಪ್ಪ ಬಿರಾದಾರ.ಸಿದ್ರಾಮ ಅಚ್ಚಿಗಾಂವ.ಭೀಮಣ್ಣ ತಾವರಖೇಡ.ಭೀರಪ್ಪ ಬಿರಾದಾರ.ಕಾಶಿರಾಮ ಬಿರಾದಾರ.ಅಪ್ಪಣಗೌಡ ಬಿರಾದಾರ. ತುಕ್ಕಪ್ಪ ಬಿರಾದಾರ.ಸೊಮಲಿಂಗ ಬಿರಾದಾರ. ಶ್ರೀಶೈಲ ತಾವರಖೇಡ. ಮತ್ತಿತ್ತರರು ಇದ್ದರು.

ವರದಿ. ಬಿ ಎಸ್ ಹೊಸೂರ.

error: