ಉಡುಪಿ ; ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ, ಸಾರ್ವಜನಿಕ ಹಿತಾಸಕ್ತಿಯಲ್ಲಿ ಉಡುಪಿ ಸುತ್ತಮುತ್ತಲಿನ ಗ್ರಾಮ ಪಂಚಾಯತಗಳಾದ ಉದ್ಯಾವರ, ಕೋಟೆ ಕಟಪಾಡಿ, ಅಂಬಲ್ಪಾಡಿ, ಅಲೆವೂರು, ತೊನ್ಸೆ ಕೆಮ್ಮಣ್ಣು ಮತ್ತು ಕಲ್ಯಾಣಪುರ ಪಂಚಾಯತುಗಳಿಗೆ ಕೋವಿಡ್ ಪೀಡಿತರಿಗೆ ಉಪಯೋಗಿಸಲು ಮೂರು ಪದರಿನ ಮಾಸ್ಕ್ ಮತ್ತು ಇತರರಿಗೆ ಎರಡು ಪದರಿನ ಮಾಸ್ಕ್ ಮತ್ತು ಕೋವಿಡ್ ಜಾಗ್ರತಿ ಪೋಸ್ಟರ್ಸ್, ಸ್ಟಿಕರ್ಸ್, ಪಾಂಪ್ಲೆಟ್ಸ್ ಗಳನ್ನು ವಿತರಿಸಲಾಯಿತು. ಈ ಕಾರ್ಯದಲ್ಲಿ ಬಿ ವಿ ಟಿ ಯ ಹಿರಿಯ ಸಲಹೆಗಾರ ಶ್ರೀಕಾಂತ್ ಹೊಳ್ಳ,ಮುಖ್ಯ ವ್ಯವಸ್ಥಾಪಕ ಮನೋಹರ್ ಕಟ್ಟಗೇರಿ, ಪ್ರೋಗ್ರಾಮ್ ಮ್ಯಾನೇಜರ್ ಅರುಣ್ ಪಟಾವರ್ಧನ್ ಮತ್ತು ಸುರೇಶ ಕುಲಾಲ್ ಭಾಗವಹಿಸಿದ್ದರು. ಕಳೆದ ಒಂದು ವಾರದಿಂದ ಉಡುಪಿ ಜಿಲ್ಲೆಯ ಐವತ್ತಾಕ್ಕೂ ಹೆಚ್ಚಿನ ಗ್ರಾಮಪಂಚಾಯಿತಿ ಗಳಿಗೆ ಮಾಸ್ಕ್, ಕೋವಿಡ್ ಜಾಗ್ರತಿ ಪೋಸ್ಟರ್ಸ್, ಸ್ಟಿಕರ್ಸ್ ಮತ್ತು ಪಾಂಪ್ಲೆಟ್ಸ್ ಗಳನ್ನು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ವಿತರಿಸಿದೆ.
More Stories
ಕರಾವಳಿ ಕಾವಲು ಪಡೆಯ ಎಸ್ಐ ಅಣ್ಣಪ್ಪ ಮೊಗೇರ ಸೇವಾ ನಿವೃತ್ತಿ
ಬಂಟಕಲ್ ಇಂಜಿನಿಯರಿAಗ್ ಕಾಲೇಜಿಗೆ“ ಟೆಕ್ ಯುವ– ಕೆ24” ನಲ್ಲಿ ಓವರ್ಆಲ್ ಚಾಂಪಿಯನ್ಶಿಪ್
ಭಾವಿ ಪರ್ಯಾಯ ಉಡುಪಿ ಶ್ರೀ ಪುತ್ತಿಗೆ ಮಠದಿಂದ ಗೀತಾ ರಥಕ್ಕೆ ಚಾಲನೆ