ಬಾಗೇಪಲ್ಲಿ:- ತಾಲ್ಲೂಕು ವಿಧಾನ ಸಭೆ ಕ್ಷೇತ್ರದ ಸಮಾಜ ಸೇವಕ ಶ್ರೀಯುತ ವೀರಾರೆಡ್ಡಿ ಯವರು ತಮ್ಮ ವೀರಾರೆಡ್ಡಿ ಫೌಂಡೇಷನ್ ವತಿಯಿಂದ ಅವರು ಸಾರ್ವಜನಿಕರಿಗೆ ಬುಧವಾರ ೮೦ ಕ್ಕೂ ಹೆಚ್ಚು ಮಣ್ಣಿನ ಗಣೇಶ ಮೂರ್ತಿಗಳನ್ನು ವಿತರಿಸಿದರು.
ಬಾಗೇಪಲ್ಲಿ ಪಟ್ಟಣದ ಹೊಂಡಾ ಶೋ ರೂಮ್ ಹಿಂಭಾಗದಲ್ಲಿ ಇರುವ ವೀರಾರೆಡ್ಡಿ ಯವರು ಮನೆ ಆವರಣದಲ್ಲಿ ಪರಿಸರಸ್ನೇಹಿ ಜೇಡಿಮಣ್ಣಿನಿಂದ ತಯಾರಿಸಿದ ಗೌರಿಗಣೇಶ ಮೂರ್ತಿಗಳನ್ನು ವಿತರಿಸಲಾಯಿತು.
ತದನಂತರ ಮಾತನಾಡಿ ನಗರದಲ್ಲಿ ಎಲ್ಲರೂ ಪರಿಸರಸ್ನೇಹಿ ಹಬ್ಬ ಆಚರಿಸಬೇಕೆಂಬುದು ನಮ್ಮ ಸಂಸ್ಥೆಯ ಉದ್ದೇಶ. ಅದಕ್ಕಾಗಿ ಪರಿಸರಸ್ನೇಹಿ ಮೂರ್ತಿಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ವೀರಾರೆಡ್ಡಿ ಫೌಂಡೇಷನ್ ಅದ್ಯಕ್ಷ ವೀರಾರೆಡ್ಡಿ ಹೇಳಿದರು.
ಪಿಒಪಿ ಗಣೇಶ ಮೂರ್ತಿಗಳನ್ನು ಕೆರೆಗಳಲ್ಲಿ ವಿಸರ್ಜನೆ ಮಾಡಿದಾಗ ಅವು ನೀರಿನಲ್ಲಿ ಸಂಪೂರ್ಣವಾಗಿ ಕರಗುವುದಿಲ್ಲ. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮವಾಗುತ್ತದೆ. ಆದರೆ, ಜೇಡಿಮಣ್ಣಿನಿಂದ ತಯಾರಿಸಿದ ಮೂರ್ತಿಗಳು ಸುಲಭವಾಗಿ ಕರಗುವುದಲ್ಲದೆ, ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಆದ್ದರಿಂದ ಸಾರ್ವಜನಿಕರು ಬಾಗೇಪಲ್ಲಿ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಅನುಮತಿಯನ್ನು ಪಡೆದು ಹಾಗೂ ಸರ್ಕಾರದ ಕೋವಿಡ್ ನಿಯಮಗಳನ್ನು ಪಾಲಿಸಿ ಗಣೇಶ ಹಬ್ಬವನ್ನು ತುಂಬಾ ಸರಳವಾಗಿ ಆಚರಿಸುವ ಮೂಲಕ ಪರಿಸರವನ್ನು ಸಂರಕ್ಷಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೀರಾರೆಡ್ಡಿ ಫೌಂಡೇಷನ್ ವ್ಯವಸ್ಥಾಪಕ ರವಿಕುಮಾರ್, ಅಧ್ಯಕ್ಷ ಆನಂದ್.ಎನ್,ದಿನೇಶ್ ರೆಡ್ಡಿ, ಶಶಿಕಲಾ, ಆದಿನಾರಾಯಣ ವೆಂಕಟೇಶ್, ರಮೇಶ್ ಬಾಬು, ಜಗದೀಶ್,ಮಹೇಶ್, ಶ್ರೀನಿವಾಸ್. ಎ.ಮಂಜುಳಾ, ರಾಧಮ್ಮ, ನಯಾರಭಾನು,ಇನಾಯಿತ್ತುಲ್ಲಾ, ಹಾಗೂ ವೀರಾರೆಡ್ಡಿ ಫೌಂಡೇಷನ್ ಕಾರ್ಯಕರ್ತರು ಹಾಜರಿದ್ದರು.
ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ
More Stories
ಬಾಗೇಪಲ್ಲಿ ಕ್ಷೇತ್ರದ 3 ಲಕ್ಷ ನಾಗರೀಕರಿಗೆ ಪೂರ್ಣ ಪ್ರಮಾಣದಲ್ಲಿ ಉಚಿತ ಹೆಲ್ತ್ ಕಾರ್ಡ್ ವಿತರಣೆ
ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಿಂದ ರಕ್ಷಾ ಬಂಧನ ಆಚರಣೆ
ಗುರಿ ಮುಟ್ಟಬೇಕು ಎನ್ನುವ ಛಲ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು- ಡಾ. ಎ.ಹೆಚ್.ರಾಮರಾವ್