May 2, 2024

Bhavana Tv

Its Your Channel

ಕುಂದಾಪುರಕ್ಕೂ ಬಂತು ಬ್ರೌನ್ ಶುಗರ್! ಒಬ್ಬನ ಬಂಧನ, ೧.೮೦೦ ಕೆ.ಜಿ ಗಾಂಜಾ ಹಾಗೂ ಬ್ರೌನ್ ಶುಗರ್ ವಶ

ಕುಂದಾಪುರ: ಮಾರಕ ಮಾದಕ ದ್ರವ್ಯ ಈಗ ಕುಂದಾಪುರಕ್ಕೂ ಕಾಲಿಟ್ಟಿರುವುದು ದೃಢವಾಗಿದೆ. ಪೊಲೀಸ್ ಕರ‍್ಯಾಚರಣೆಯಲ್ಲಿ ಬ್ರೌನ್ ಶುಗರ್ ಹಾಗೂ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.

ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಪೊಲೀಸ್ ಉಪಾಧೀಕ್ಷಕ ಶ್ರೀಕಾಂತ್ ಮತ್ತು ತಂಡ ಬ್ರೌನ್ ಶುಗರ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಸೊತ್ತುಗಳ ಸಹಿತ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಉತ್ತರಕನ್ನಡ ಜಿಲ್ಲೆ, ಕಾರವಾರ, ಬಿಣಗಾ, ಅಸ್ಸಾಭಾಗ್, ನಿವಾಸಿ ಗುಡುಮಿಯಾ ಎಂಬಾತನ ಮಗ ಮಹಮ್ಮದ್ ಜಾಫರ್ ಗುಡುಮಿಯಾ (೨೮) ಎಂದು ಗುರುತಿಸಲಾಗಿದೆ. ಜೊತೆಗೆ ಆರೋಪಿಯ ಬಳಿ ಇದ್ದ ಒಂದು ಕೆ.ಜಿ ಎಂಟುನೂರು ತೂಕದ ಗಾಂಜಾ ಅಂದಾಜು ಮೌಲ್ಯ ನಲ್ವತ್ತು ಸಾವಿರ ರೂಪಾಯಿ ಹಾಗೂ ಒಂದು ಗ್ರಾಂ ಬ್ರೌನ್ ಶುಗರ್ ಅಂದಾಜು ಮೌಲ್ಯ ಹತ್ತು ಸಾವಿರ ರೂಪಾಯಿ, ಎರಡು ಮೊಬೈಲ್ ಫೋನ್, ಒಂದೂವರೆ ಸಾವಿರ ರೂಪಾಯಿ ನಗದನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮೂಲಕ ಕುಂದಾಪುರಕ್ಕೂ ಬ್ರೌನ್ ಶುಗರ್ ಕಾಲಿಟ್ಟಿರುವ ಭಯಾನಕ ಸತ್ಯವನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ!

error: