April 30, 2024

Bhavana Tv

Its Your Channel

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿಧಾನ ಪರಿಷತ್ತು ಸದಸ್ಯತ್ವ ಕಾಂಗ್ರೆಸ್ ಪಾಲು, ಕಾರ್ಯಕರ್ತರ ಸಿಹಿ ಹಂಚಿ ಸಂಭ್ರಮ

ಬಾಗೇಪಲ್ಲಿ : ವಿಧಾನ ಪರಿಷತ್ತು ಚುನಾವಣೆಯ ಫಲಿತಾಂಶ ಹೊರಬಂದು ಕಾಂಗ್ರೇಸ್ ಅಭ್ಯರ್ಥಿ ಎಂ.ಎಲ್. ಅನಿಲ್ ಕುಮಾರ್ ಜಯಗಳಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.

ಸ್ಥಳಿಯ ಸಂಸ್ಥೆಗಳ ಕೋಲಾರ ಚಿಕ್ಕಬಳ್ಳಾಪುರ ವಿಧಾನಪರಿಷತ್ ಚುನಾವಣೆ ಇದೇ ತಿಂಗಳ ೧೦ ರಂದು ನಡೆಯಿತು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ಜಿದ್ದಾಜಿದ್ದಿ ಪೈಪೋಟಿ ಕಂಡು ಬಂದಿತ್ತು, ಮಂಗಳವಾರ ಹೊರಬಂದ ಫಲಿತಾಂಶ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಎಂ.ಎಲ್.ಅನಿಲ್ ಕುಮಾರ್ ,ರವರನ್ನು ಚುನಾವಣೆ ಅಧಿಕಾರಿಗಳು ಜಯವನ್ನು ಘೋಷಣೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ಅಮರನಾಥ ರೆಡ್ಡಿ ಅವರ ನೇತೃತ್ವದಲ್ಲಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡಿಸಿ, ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಅದ್ಯಕ್ಷ ಕೆ.ಆರ್.ನರೇಂದ್ರ ಬಾಬು, ಕಾಂಗ್ರೇಸ್ ಮುಖಂಡರಾದ ಶ್ರೀನಿವಾಸ್, ನಿಜಾಮುದ್ದೀನ್ ಬಾಬು,ಪುರಸಭೆ ಅದ್ಯಕ್ಷೆ ರೇಷ್ಮಾಬಾನು, ಉಪಾಧ್ಯಕ್ಷ ಎ.ಶ್ರೀನಿವಾಸ್ ನಯಾಜ್,ರಾಹುಲ್, ಶ್ರೀರಾಮ, ಲಂಬೂ ಶೀನಾ, ಬಾಬಾ ಫಕೃದ್ಧೀನ್, ಶ್ರೀನಿವಾಸರೆಡ್ಡಿ, ಮದ್ದಿಲೇಟಿರೆಡ್ಡಿ, ದೇವಿಕುಂಟೆ ರುಜ್ವಾನ್ ಸಾಬ್, ಸುಧಾಕರ್ ಮತ್ತಿತರೆ ಕಾಂಗ್ರೆಸ್ ಮುಖಂಡರು, ಕಾರ್ಯರ್ಕತರು ಈ ವಿಜಯೋತ್ಸವದಲ್ಲಿ ಹಾಜರಿದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: