ನಾಡಿನ ಸರಳ ಸಜ್ಜನ ರಾಜಕಾರಣಿ ಮಂಡ್ಯದ ಗಾಂಧಿ ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನಕ್ಕೆ ಒಂದು ಲಕ್ಷರೂ ಕೊಡುಗೆ ನೀಡಿದ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಡಾಲುರವಿ … ಕೃಷ್ಣ ಅಭಿಮಾನಿಗಳ ಸಂತಸ …
ಕೆ.ಆರ್.ಪೇಟೆ ಸರಳ ಸಜ್ಜನ ರಾಜಕಾರಣಿ,ಸಹಕಾರಿ ಧುರೀಣ,ಮಾಜಿ ಸ್ಪೀಕರ್ ಕೃಷ್ಣ ಅವರ ಸವಿನೆನಪಿಗಾಗಿ ಪಟ್ಟಣದ ಬಿಜಿಎಸ್ ಕಾಂಪ್ಲೆಕ್ಸ್ ನಲ್ಲಿರುವ
ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನ(ರಿ.)ದ ಅಭಿವೃದ್ಧಿಗೆ ಮನ್ಮುಲ್ ನಿರ್ದೇಶಕರಾದ ಡಾಲು ರವಿ ಅವರು ವೈಯುಕ್ತಿಕವಾಗಿ ಉದಾರವಾಗಿ ಒಂದು ಲಕ್ಷ ರೂಪಾಯಿಗಳನ್ನು ದಾನವಾಗಿ
ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಕೃಷ್ಣ’ರ ಧರ್ಮಪತ್ನಿ ಇಂದ್ರಮ್ಮಕೃಷ್ಣ ಅವರಿಗೆ ದೇಣಿಗೆಯಾಗಿ ನೀಡಿದರು.
ಬಳಿಕ ಮಾತನಾಡಿದ ಕೆ ಆರ್ ಪೇಟೆ ಕೃಷ್ಣ ಪ್ರತಿಷ್ಠಾನ ಅಧ್ಯಕ್ಷರಾದ ಗೂಡೆಹೊಸಹಳ್ಳಿ ಜವರೇಗೌಡ ಅವರು ಮಾತನಾಡಿ ಸರಳತೆಗೆ ಹೆಸರುವಾಸಿಯಾಗಿದ್ದ ನಮ್ಮ ನಾಯಕರಾದ ಕೊತ್ತಮಾರನಹಳ್ಳಿ ಕೃಷ್ಣ ಅವರು ವಕೀಲ ವೃತ್ತಿಯಲ್ಲಿರುವಾಗಲೇ ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿ ಕೊಂಡಿದ್ದ ಅವರು ತಾಲೂಕು ಬೋರ್ಡ್ ಸದಸ್ಯರಾಗಿ ರಾಜಕಾರಣಕ್ಕೆ ಪ್ರವೇಶ ಮಾಡಿ ಶಾಸಕರಾಗಿ,ಸಚಿವರಾಗಿ ಲೋಕಸಭಾ ಸದಸ್ಯರಾಗಿ, ಮತ್ತು ವಿಧಾನಸಭಾಧ್ಯಕ್ಷರಾಗಿ ಜವಾಬ್ದಾರಿಗಳನ್ನು ತಮ್ಮ ಪ್ರಾಮಾಣಿಕತೆ ಹಾಗೂ ಬದ್ಧತೆಗಳಿಗೆ ಚ್ಯುತಿ ಬರದಂತೆ ನಡೆದುಕೊಂಡ ರೀತಿ, ರಾಜಕಾರಣದ ಪಯಣ,ಹೋರಾಟದ ಮನೋಭಾವನೆಗಳ ಹೆಜ್ಜೆಗಳ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಅವರು ಆದರ್ಶ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ ಆದ್ದರಿಂದ ಪ್ರತಿಷ್ಠಾನದ ಉದ್ದೇಶವೇನೆಂದರೆ ಅವರ ಸರಳತೆ ಮತ್ತು ಪ್ರಾಮಾಣಿಕ ರಾಜಕಾರಣವನ್ನು ಮುಂದಿನ ಯುವ ಜನತೆಗೆ ಪರಿಚಯಿಸುವುದು. ಚುನಾವಣೆಗಳು,ರಾಜಕಾರಣ, ಪ್ರಸ್ತುತ ಕೃಷಿ ಬಿಕ್ಕಟ್ಟುಗಳು, ಹಾಗೂ ಪರಿಹಾರಗಳ ಬಗ್ಗೆ ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಿವುದು. ಕೃಷ್ಣ ಅವರ ಹೆಸರಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ನ ನೀಡುವುದು. ಪಟ್ಟಣದಲ್ಲಿ ಕೃಷ್ಣ ಸಾಂಸ್ಕೃತಿಕ ಭವನ ನಿರ್ಮಾಣ ಮಾಡುವುದು.ಹೀಗೆ ಇನ್ನೂ ಅನೇಕ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಗಳನ್ನು ರೂಪಿಸಲು ಹಾಗೂ ಜಾರಿಗೆ ತರಲು ಕೃಷ್ಣ ಅವರ ಮೇಲೆ ಅಪಾರವಾದ ಅಭಿಮಾನ ಹೊಂದಿರುವ ಯಾರಾದರೂ ಸರಿ ಉದಾರವಾಗಿ ದಾನವನ್ನು ನೀಡುವುದರ ಮೂಲಕ ಪ್ರತಿಷ್ಠಾನದ ಕಾರ್ಯಕ್ರಮಗಳಿಗೆ ನಿಮ್ಮ ಸಲಹೆ, ಸಹಕಾರ, ಪ್ರೋತ್ಸಾಹ ನೀಡಬೇಕೆಂದು ಗೂಡೆಹೊಸಹಳ್ಳಿ ಜವರೇಗೌಡ ಅವರು ಕೃಷ್ಣ ಅವರ ಅಭಿಮಾನಿಗಳಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆ ಆರ್ ಪೇಟೆ ಕೃಷ್ಣ ಪ್ರತಿಷ್ಠಾನದ ಗೌರವ ಅಧ್ಯಕ್ಷರಾದ ಶ್ರೀಮತಿ ಇಂದ್ರಮ್ಮಕೃಷ್ಣ, ಟ್ರಸ್ಟಿಗಳಾದ ಹಾದನೂರು ಪರಮೇಶ್, ಸಂತೇಬಾಚಹಳ್ಳಿ ನಾಗರಾಜು, ಕೈಗೋನಹಳ್ಳಿ ಜಯರಾಂ ಇತರರು ಪಾಲ್ಗೊಂಡಿದ್ದರು.
ವರದಿ: ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ
More Stories
ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ
ದೇವಿರಮ್ಮಣ್ಣೆ ಕೆರೆ ಅಂಗಳಕ್ಕೆ ಇಳಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ರೈತ ಬಾಂಧವರು