ಕೃಷ್ಣರಾಜಪೇಟೆ ತಾಲ್ಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದ ಅಮಿತಾ ಮಂಜನಾಥ್ ಗೌಡ ರವರ ಪುತ್ರಿಯಾದ ನಿಶಾ ಗೌಡ ರವರನ್ನು ತಾಲ್ಲೂಕಿನ ಅಗ್ರಹಾರ ಬಾಚಹಳ್ಳಿ ಗ್ರಾಮದ ಪ್ರೇಮ ನಾಗೇಶ್ ರವರ ಮಗ ರಾಮಕೃಷ್ಣ ಎಂಬುವರಿಗೆ ಕಳೆದ ಮೂರು ವರ್ಷದ ಹಿಂದೆ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು.
ಆದ್ರೆ ಆಸಾಮಿ, ಹಾಗೂ ಅವರ ಕುಟುಂಬದವರು ಮದುವೆ ಮಾಡಿಕೊಂಡ ಮೇಲೆ ಹೆಚ್ಚುವರಿ ವರದಕ್ಷಿಣೆಗೆ ಬೇಡಿಕೆ ಇಟ್ಟು ಪದೇ ಪದೇ ಮಾನಸಿಕ ಕಿರುಕುಳ ನೀಡುತ್ತಿರುವ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆಯ ತಂಗಿ ಕವಿತಾ ವಿಜಯ್ ರವರು ಕೆ ಆರ್ ಪೇಟೆ ಪಟ್ಟಣದ ಪೋಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಕೇಸು ದಾಖಲಿಸಿಕೊಂಡ ಕೆ.ಆರ್ ಪೇಟೆ ಪೋಲೀಸರು ರಾಮಕೃಷ್ಣ ರವರ ತಾಯಿಯನ್ನು ಈಗಾಗಲೇ ಬಂಧಿಸಿ ನ್ಯಾಯಾಲಯದ ಬಂಧನಕ್ಕೆ ಒಪ್ಪಿಸಲಾಗಿದ್ದು ಆದ್ರೆ ನನ್ನ ತಂಗಿಯ ಸಾವಿಗೆ ಕಾರಣಕರ್ತರಾದ ರಾಮಕೃಷ್ಣ ಆತನ ತಂದೆ ನಾಗೇಶ್, ಮಗಳು ದೀಪ, ವಿನೋದ, ದೇವರಾಜು ವಿರುದ್ದು ದೂರು ದಾಖಲಿಸಿದ್ದು ಕೂಡಲೇ ಇವರನ್ನು ಬಂಧಿಸುವAತೆ ಮನವಿ ಮಾಡಿದರು..
ವರದಿ: ಶಂಭು ಕಿಕ್ಕೇರಿ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ