ಹೊನ್ನಾವರ: ಪತ್ರಿಕಾರಂಗದಲ್ಲಿ ಜೀಯು ಎಂದೇ ಪರಿಚಿತರಾಗಿರುವ ಹಿರಿಯ ಪತ್ರಕರ್ತ ಜಿ ಯು ಭಟ್ ಅವರನ್ನು ಸಾರ್ವಜನಿಕವಾಗಿ ಅಭಿನಂದಿಸುವ ಜೀಯು 75 ಅಮೃತಾಭಿನಂದನೆ ಕಾರ್ಯಕ್ರಮ ಪಟ್ಟಣದ ಪ್ರಭಾತನಗರದ ಮೂಡಗಣಪತಿ ಸಭಾಭವನದಲ್ಲಿ ಡಿ.13 ರಂದು ಬೆಳಿಗ್ಗೆ 10 ಕ್ಕೆ ನಡೆಯಲಿದೆ.
ಕಾರ್ಯಕ್ರಮದ ಕುರಿತು ಜೀಯು ಅಭಿನಂದನಾ ಸಮಿತಿಯ ಕಾರ್ಯಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ವಿವರ ನೀಡಿದರು.
ಜಿ ಯು ಭಟ್ ಅವರಿಗೆ 75 ವರ್ಷವಾಗಿದ್ದು ಪತ್ರಕರ್ತರಾಗಿ 50 ವರ್ಷ ತುಂಬಿದೆ ಜೀಯು ಜಿಲ್ಲೆಯ ಜನಾಭಿಪ್ರಾಯಕ್ಕೆ ದನಿಯಾಗಿದ್ದಾರೆ ಎಂದರು.
ಬೆಳಿಗ್ಗೆ 10 ಕ್ಕೆ ಸ್ಥಳೀಯ ಸಂಗೀತ ಕಲಾವಿದರಿಂದ ‘ನಾದಾಭಿನಂದನೆ, ನಡೆಯುವುದು. 11:30ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು ಮಣಿಪಾಲ ಮೀಡಿಯಾ ನೆಟ್ ವರ್ಕ್ ಕಾರ್ಯನಿರ್ವಾಹಕ ಅಧ್ಯಕ್ಷಸತೀಶ ಯು ಪೈ , ತರಂಗ ವಾರಪತ್ರಿಕೆ ಸಂಪಾದಕಿ ಡಾ ಸಂಧ್ಯಾ ಎಸ್ ಪೈ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಾದಂಬರಿಕಾರ ಗಜಾನನ ಶರ್ಮಾ ಅಭಿನಂದನಾ ನುಡಿಗಳನ್ನಾಡುವರು. ಜೀಯು ಅಭಿನಂದನಾ ಗ್ರಂಥ “ಜೀವನದಿ” ಹಾಗೂ ಜೀಯು ಅಂಕಣ ಬರಹಗಳ ಸಂಕಲನ “ಜನವಾಣಿ” ಬಿಡುಗಡೆ ಗೊಳ್ಳಲಿವೆ ಎಂದು ಹೇಳಿದರು
ಪ್ರತಿಕಾಗೋಷ್ಟಿಯಲ್ಲಿ ಸಮಿತಿ ಗೌರವಾಧ್ಯಕ್ಷ ಆರ್ ಎಸ್ ರಾಯ್ಕರ ಉಪ್ಪೋಣಿ, ಅಧ್ಯಕ್ಷ ವೆಂಕಟ್ರಮಣ ಹೆಗಡೆ ಕವಲಕ್ಕಿ, ಉಪಾಧ್ಯಕ್ಷ ಚಂದ್ರಶೇಖರ ಗೌಡ ಮಂಕಿ, ಎಂ.ಆರ್ ಹೆಗಡೆ ಗುಣವಂತೆ, ನಾಗರಾಜ ಹೆಗಡೆ ಅಪಗಾಲ, ಪ್ರಶಾಂತ ಹೆಗಡೆ ಮೂಡಲಮನೆ,ಚಂದ್ರಕಾAತ ಕೊಚರೇಕರ, ನಾರಾಯಣ ಯಾಜಿ, ಎಸ್ ಜೆ ಕೈರನ್ ಮುಂತಾದವರು ಉಪಸ್ಥಿತರಿದ್ದರು
More Stories
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ
ಯಕ್ಷರಂಗದ ಅಪ್ರತಿಮ ಭಾಗವತ ದಿ. ಸುಬ್ರಮಣ್ಯ ಧಾರೇಶ್ವರ-ವಿ. ಕೆ. ಭಟ್