ಭಟ್ಕಳ: ತಾಲ್ಲೂಕಿನ ಮುರ್ಡೇಶ್ವರದ ಕನ್ನಡ ಶಾಲೆಯ ಹತ್ತಿರವಿರುವ ಶ್ರೀ ಮಹಾಂಕಾಳಿಕಾ ಅಮ್ಮನವರ ದೇವಸ್ಥಾನಕ್ಕೆ ಬ್ರಹ್ಮಾಂಡ ಗುರೂಜಿ ಎಂದೇ ಪ್ರಖ್ಯಾತಿ ಪಡೆದಿರುವ ಖ್ಯಾತ ಜ್ಯೋತಿಷಿ ನರೇಂದ್ರ ಬಾಬು ಶರ್ಮಾ ರವರು ಭೇಟಿ ನೀಡಿ ದೇವರ ದರ್ಶನ ಪಡೆದರು. ಜಿಲ್ಲೆಯ ಜಾಗೃತ ಶಕ್ತಿ ಸ್ಥಳಗಳಲ್ಲಿ ಒಂದಾಗಿರುವ ಶ್ರೀ ಮಹಾಂಕಾಳಿಕಾ ಅಮ್ಮನವರ ಸನ್ನಿದಾನದ ವಿಶೇಷತೆಗಳನ್ನು ತಿಳಿದು ಬ್ರಹ್ಮಾಂಡ ಗುರೂಜಿಯವರು ಪ್ರಸನ್ನರಾದರು.ಸನ್ನಿಧಾನದ ಮಹಿಮೆ,ಹಿನ್ನೆಲೆ, ಶಿಷ್ಟಾಚಾರ ಮತ್ತು ಸಂಪ್ರದಾಯಗಳ ಬಗ್ಗೆ ತಿಳಿದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಖ್ಯಾತಿ ಪಡೆಯುವ ಬಗ್ಗೆ ಮುನ್ಸೂಚನೆ ನೀಡಿದರು. ಸ್ವತಃ ಬ್ರಹ್ಮಾಂಡ ಗುರೂಜಿ ಯವರೇ ಅಮ್ಮನವರಿಗೆ ಆರತಿ ಎತ್ತಿ ನಮನಗಳನ್ನು ಸಲ್ಲಿಸಿದರು.ದೇವಸ್ಥಾನದ ವತಿಯಿಂದ ಪ್ರಧಾನ ಅರ್ಚಕರೂ ಮತ್ತು ಧರ್ಮದರ್ಶಿಗಳೂ ಆದ ದೈವಜ್ಞ ಉದಯಕುಮಾರ್ ಶೇಟ್ ದಂಪತಿಗಳು ಬ್ರಹ್ಮಾಂಡ ಗುರೂಜಿಯವರನ್ನು ಸನ್ಮಾನಿಸಿದರು. ಶ್ರೀ ಮಹಾಂಕಾಳಿಕಾ ಅಮ್ಮನವರ ಮಹಿಮೆ ಅಪಾರವಾಗಿದ್ದು, ಭಕ್ತಾದಿಗಳು ರಾಜ್ಯ,ಪರರಾಜ್ಯ ಮತ್ತು ವಿದೇಶಗಳಿಂದಲೂ ಬಂದು ದೇವರಿಗೆ ಸೇವೆ,ಹರಕೆಯನ್ನು ಸಲ್ಲಿಸಿ ಕೃತಾರ್ಥರಾಗುತ್ತಾರೆ.
ನವರಾತ್ರಿಯಲ್ಲಂತೂ ಪ್ರತಿದಿನ ರಾತ್ರಿ ವಿಶೇಷ ಪೂಜಾ ಕೈಂಕರ್ಯಗಳು ಮತ್ತು ಅನ್ನಸಂತರ್ಪಣೆ ಜರಗುತ್ತದೆ.
ಶ್ರೀ ಮಹಾಂಕಾಳಿಕಾ ಅಮ್ಮನವರ ಸನ್ನಿಧಿಯಲ್ಲಿ ಪ್ರತಿದಿನ ಶ್ರೀ ಗಣಪತಿ, ಶ್ರೀ ಆಂಜನೇಯ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ಪೂಜೆ ಹಾಗೂ ಪ್ರತಿ ಶುಕ್ರವಾರ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.