April 28, 2024

Bhavana Tv

Its Your Channel

ನವಜೀವನಕ್ಕೆ ಕಾಲಿಟ್ಟ ದಂಪತಿಗಳಿ0ದ ಮುಖ್ಯಮಂತ್ರಿ ಪರಿಹಾರ ನಿಧಿಗೆ ೫೦ಸಾವಿರ ಚೆಕ್ ಕೊಡುಗೆ.


ಕುಮಟಾ; ಪಟ್ಟಣದ ನಿವಾಸಿ ರಾಘವೇಂದ್ರ ಇವರು ಸ್ನೇಹಾ ಎನ್ನುವವರನ್ನು ಬಾಳಸಂಗಾತಿಯಾಗಿ ಶುಕ್ರವಾರ ಕೈ ಹಿಡಿಯುವ ಮೂಲಕ ನವ ಜೀವನಕ್ಕೆ ಕಾಲಿಟ್ಟರು. ಈ ಸಂತಸದ ಕ್ಷಣವನ್ನು ಸವಿನೆನಪಾಗಿ ಇಡುವ ಇತರರಿಗೆ ಮಾದರಿಯಾಗಲು ಕರೋನಾ ಸಂಕಷ್ಟದಲ್ಲಿ ಇರುವವರಿಗೆ ನೆರವಾಗಲು ಮುಂದಾಗಿದ್ದರು. ತಾನು ನವ ಜೀವನಕ್ಕೆ ಕಾಲಿಟ್ಟುರುದರಿಂದ ಈ ದಿನವೇ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣವನ್ನು ನೀಡಲು ಉತ್ಸುಕರಾಗಿದ್ದರು. ಈ ವಿಷಯವನ್ನು ಕುಮಟಾ ಶಾಸಕ ದಿನಕರ ಶೆಟ್ಟಿ ಗಮನಕ್ಕೆ ಕುಟುಂಬಸ್ಥರು ತಿಳಿಸಿದಾಗ ನೇರವಾಗಿ ಮನೆಗೆ ತೆರಳಿ ಚೆಕ್ ಸ್ವಿಕರಿಸುವ ಮೂಲಕ ನವ ದಂಪತಿಗಳಿಗೆ ಶುಭ ಹಾರೈಸಿದರು.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ ರಾಘವೆಂದ್ರ ಕುಟುಂಬಸ್ಥರು ಆರಂಭದಿAದಲೂ ನನ್ನ ಒಡನಾಡಿಗಳಾಗಿದ್ದರು. ಈ ದಿನ ಶುಭ ಕಾರ್ಯಕ್ರಮದ ದಿನವೇ ಮುಖ್ಯಮಂತ್ರಿ ಪರಿಹಾರ ನಿಧಿಗೆ ೫೦ ಸಾವಿರದ ಚೆಕ್ ನೀಡುತ್ತಿರುವುದು ಸಂತಸ ತಂದಿದೆ ಇದು ಇತರರಿಗೂ ಮಾದರಿಯಾಗಿದ್ದು ನನ್ನ ಕ್ಷೇತ್ರದಲ್ಲಿ ಹಲವರು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳ ಖಾತೆಗೆ ಹಣ ನೀಡುವ ಮೂಲಕ ನೆರವಾಗಿದ್ದಾರೆ. ಎಲ್ಲರಿಗೂ ಕ್ಷೇತ್ರದ ಶಾಸಕನಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ರಾಘವೇಂದ್ರ ಮತ್ತು ಸ್ನೇಹಾ ಕುಟುಂಬಸ್ಥರು ಹಾಜರಿದ್ದರು.

error: