April 30, 2024

Bhavana Tv

Its Your Channel

ಪಶ್ಚಿಮ ಬಂಗಾಳದ ಬಿಜೆಪಿ ಕಾರ್ಯಕರ್ತರ ಹತ್ಯೆ ಮತ್ತು ಹಲ್ಯೆಯನ್ನು ಖಂಡಿಸಿ ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಧರಣಿ ಹಾಗೂ ಮೌನ ಪ್ರತಿಭಟನೆ

ಬೆಳಗಾವಿ: ಭಾಜಪಾ ಬೆಳಗಾವಿ ಗ್ರಾಮೀಣ ಮಂಡಳ ವತಿಯಿಂದ ಪಶ್ಚಿಮ ಬಂಗಾಳದಲ್ಲಿ ಹಾಡುಹಗಲೆ ಬಿಜೆಪಿ ಕಾರ್ಯಕರ್ತರ ಹತ್ಯೆ ಮತ್ತು ಹಲ್ಯೆಯನ್ನು ಖಂಡಿಸಿ ಇಂದು ಬೆಳಗ್ಗೆ ೯:೩೦ಕ್ಕೆ ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಧರಣಿ ಹಾಗೂ ಮೌನ ಪ್ರತಿಭಟನೆ ಮಾಡಲಾಯಿತು ಕೋವಿಡ ಕಾರಣದಿಂದಾಗಿ ೨೦ಕ್ಕಿಂತ ಕಡಿಮೆ ಕಾರ್ಯಕರ್ತರು ಮತ್ತು ಕೋವಿಡ ನಿಯಮಗಳನ್ನು ಅನುಸರಿಸಿ ಪ್ರತಿಭಟನೆ ನಡೆಸಲಾಯಿತು,
೪೮ ಗಂಟೆಗಳಲ್ಲಿ ೧೦ ಜನ ಕಾರ್ಯಕರ್ತರ ಹತ್ಯೆಯಾಗಿದೆ, ನೂರಾರು ಮನೆಗಳು ಅಗ್ನಿಗಾಹುತಿಯಾಗಿವೆ ಪಶ್ಚಿಮ ಬಂಗಾಳ ಇಂದು ಕಾಶ್ಮೀರದ ರೀತಿಯಲ್ಲಿ ಸಾಗುತ್ತಿದೆ.
ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಮಂಡಳ ಅಧ್ಯಕ್ಷರಾದ ಧನಂಜಯ ಜಾಧವರವರು, ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ, ಪಂಕಜ ಘಾಡಿ, ಉಮೇಶ ಪುರಿ, ಶಿವಾಜಿ ಸುಂಟಕರ, ಭಾಗ್ಯಶ್ರೀ ಕೊಕಿತಕರ, ಸ್ವಾತಿ ಜಗದಾಲೆ ಮತ್ತಿತರರು ಉಪಸ್ಥಿತರಿದರು.

error: