April 29, 2024

Bhavana Tv

Its Your Channel

ನೇಕಾರ ಕ್ಷೇಮಾಭಿವೃದ್ಧಿ ಸಂಘ ಕಮತಗಿ ಇವರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಸನ್ಮಾನ.

ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಶ್ರೀ ಬನಶಂಕರಿ ನೇಕಾರ ಕ್ಷೇಮಾಭಿವೃದ್ಧಿ ಸಂಘ ಕಮತಗಿ ಇವರ ವತಿಯಿಂದ ಕಳೆದ ಮಾರ್ಚ್ ನಲ್ಲಿ ಎಸ್ ಎಸ್‌ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಸನ್ಮಾನಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ರವೀಂದ್ರ ಗುರಪ್ಪ ಸಿನ್ನೂರ್ ಅವರು ರೈತ ಮಕ್ಕಳಿಗೆ ಸಿಗುವ ಸೌಲಭ್ಯ ಮತ್ತು ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಿಗುವ ಸೌಲಭ್ಯಗಳು ನಮ್ಮ ಬಡ ನೇಕಾರ ಸಮುದಾಯದ ಮಕ್ಕಳಿಗೆ ಸಿಗುವಂತಾಗಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಗುರುನಾಥ್ ಶಂಕ್ರಪ್ಪ ಸಿನ್ನೂರ್ ಉಪಾಧ್ಯಕ್ಷರು ಗುರುಪಾದಪ್ಪ ಕಡ್ಲಿಮಟ್ಟಿ ಖಜಾಂಚಿ ರಾಮಚಂದ್ರಪ್ಪ ಬಸಪ್ಪ ಅಚನೂರ ಕಾರ್ಯದರ್ಶಿ ರವೀಂದ್ರ ಗುರಪ್ಪ ಸಿನ್ನೂರ್ ಹಾಗೂ ಸಿದ್ದಪ್ಪ ಭಾಪ್ರಿ ಶಿವು ಮೇದಾರ್ ಹಾಗೂ ಸಂಘದ ಸರ್ವ ಸದಸ್ಯರು ಈ ಸಮಾರಂಭದಲ್ಲಿ ಹಾಜರಿದ್ದರು

error: