ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಭೇಟಿ ನೀಡಿದ ಜಿಲ್ಲಾ ಬಿಸಿ ಊಟದ ಅಧಿಕಾರಿ ರಾಜೇಂದ್ರ ತೇರದಾಳ
ಕರ್ನಾಟಕ ಸರ್ಕಾರದ ಮಹತ್ವದ ಯೋಜನೆ ಪೌಷ್ಠಿಕತೆಯಿಂದ ಕೊಡಿದ್ದ ಮೊಟ್ಟೆ, ಶೇಂಗಾ ಚಿಕ್ಕಿ ಹಾಗೂ ಬಾಳೆಹಣ್ಣು ವಿತರಿಸುವ ಕಾರ್ಯಕ್ರವನ್ನು ಅಥಣಿ ತಾಲ್ಲೂಕಿನ ಕೊಕಟನೂರ ಹಾಗೂ ಕಟಗೇರಿ ಗ್ರಾಮದ ಶಾಲೆಗಳಲ್ಲಿ ಪರಸಿಲಿಸಿದಾಗ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿದ್ದಾರೆ ಎಂದು ತಿಳಿಸಿದರು.
ಕೊಕಟನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ಭೇಟಿನೀಡಿ ಅಲ್ಲಿನ ಅಡುಕೆ ಸಿಬ್ಬಂದಿಯವರಿಗೆ ಮತ್ತು ಶಿಕ್ಷಕ ವರ್ಗದವರಿಗೆ ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ನೋಡಿಕೊಳ್ಳಿ ಅವರಲ್ಲಿ ಹೆಚ್ಚಿನ ಕಲಿಕಾ ಕೌಶಲ್ಯ ಅಭಿವೃದ್ಧಿ ಹೊದಬೇಕು ಎನ್ನುವ ಮೂಲಕ ತಿಳಿ ಮಾತನ್ನು ಹೇಳಿದರು.
ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆ ರಕ್ತಹೀನತೆ ಹಾಗೂ ಬಹು ಪೋಷಕಾಂಶಗಳ ನ್ಯೂನತೆ ಹೋಗಲಾಡಿಸಲು ಹಮ್ಮಿಕೊಂಡಿರುವ ಕಾರ್ಯಕ್ರಮ ಇದಾಗಿದೆ. ನಂತರ ಶಾಲೆಯ ಕೈಗಾರಿಕ ತೋಟ ಹಾಗೂ ಅಲ್ಲಿಯ ಆವರಣದಲ್ಲಿದ ಪರಿಸರದ ವಾತಾವರಣ ವ್ಯವಸ್ಥೆಯನ್ನು ನೋಡಿ ಅಧಿಕಾರಿ ಸಂತೋಷ ಪಟ್ಟರು.
ವರದಿ: ಮಹೇಶ ಶರ್ಮಾ ಬೆಳಗಾವಿ
More Stories
ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ಪ್ರತಿಮೆ ಸ್ಥಾಪನೆಗೆ ಭೂಮಿ ಪೂಜೆ
ಬುಡಕಟ್ಟು ಸಿದ್ಧಿ ಸಮುದಾಯದವರ ವಿವಿಧ ಬೇಡಿಕೆಗಳ ಕುರಿತು ಸುವರ್ಣಸೌಧದಲ್ಲಿ ಸಚಿವ ಶಿವರಾಮ ಹೆಬ್ಬಾರ ರವರು ಮುಖ್ಯಮಂತ್ರಿಗೆ ಮನವಿ
10 ದಿನಗಳಲ್ಲಿ ನೇಕಾರರ ಸಮಸ್ಯೆಗಳಿಗೆ ಪರಿಹಾರ, ಸಚಿವ ಶ್ರೀರಾಮುಲು ಭರವಸೆ