May 11, 2024

Bhavana Tv

Its Your Channel

ಕ್ಯಾನ್ಸರ್ ಇಂದ ಬಳಲುತ್ತಿದ್ದ ಬಸವಣ್ಣನಿಗೆ ಕರುನಾಡ ಯುವಶಕ್ತಿ ಸಂಘಟನೆ ವತಿಯಿಂದ ನೆರವು

ಗುಂಡ್ಲುಪೇಟೆ ತಾಲೂಕಿನ ಶ್ಯಾನಡ್ರಹಳ್ಳಿ ಗ್ರಾಮದ ಬಸವರಾಜು ಜವರಮ್ಮ ರವರ ಮಗ ೩೬ ವರ್ಷದ ಬಸವಣ್ಣ ಎಂಬಾತನಿಗೆ ಕ್ಯಾನ್ಸರ್ ಕಾಯಿಲೆ ಇದೆ ಎಂಬುದು ದೃಢ ಪಟ್ಟಿದ್ದು . ಹೊಟ್ಟೆ ಭಾಗದಲ್ಲಿ ಶಸ್ತ್ರಚಿಕಿತ್ಸೆ ಒಳಪಟ್ಟಿದ್ದು ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ ಬಸವಣ್ಣ ಕುಟುಂಬವನ್ನು ನಿರ್ವಹಣೆ ಮಾಡಲು ಕಷ್ಟವಾಗಿದೆ . ಅಲ್ಲದೆ ಆರ್ಥಿಕ ಸಮಸ್ಯೆಗಳು ಪ್ರತಿದಿನ ಹೆಚ್ಚುತ್ತಿದೆ . ಇದನ್ನು ಮನಗಂಡ ಕರುನಾಡ ಯುವಶಕ್ತಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಮುನೀರ್ ಪಾಶ ರವರು ತಮ್ಮ ವೈಯಕ್ತಿಕ ಖರ್ಚಿನಲ್ಲಿ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡಿದ್ದಾರೆ.
ಸಂಘಟನೆಯ ಸಲಹೆಗಾರದ ಕಾಳಿಂಗ ಸ್ವಾಮಿ ಮಾತನಾಡಿ ಈ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಬಸವಣ್ಣನಿಗೆ ತಮ್ಮ ಕರುನಾಡ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಮುನೀರ್ ಪಾಸ್ ರವರು ಈ ಜಿಲ್ಲೆಗೆ ಮತ್ತು ಈ ತಾಲೂಕಿಗೆ ಇಂತಹ ಕಷ್ಟದಲ್ಲಿರುವವರಿಗೆ ತಮ್ಮ ಕೈಲಾದ ಸಹಾಯವನ್ನು ಸಂಘಟನೆಯೊAದಿಗೆ ಸೇರಿ ಮಾಡಿಕೊಂಡು ಬರುತ್ತಿದ್ದಾರೆ ಅವರ ಈ ಕೆಲಸ ಅನನ್ಯ ಎಂದರು. ಈ ಸಂದರ್ಭದಲ್ಲಿ ಕರುನಾಡ ಯುವಶಕ್ತಿ ಸಂಘಟನೆಯ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಈಶ್ವರ್, ಕಾರ್ಯದರ್ಶಿ ಹಾಗೂ ತಾಲೂಕಿನ ಅಧ್ಯಕ್ಷರಾದ ಮುನೀರ್ ಪಾಷ, ಸಲಹೆಗಾರರು ಹಾಗೂ ಲೇಖಕರಾದ ಎಸ್ ಕಾಳಿಂಗ ಸ್ವಾಮಿ, ಸಿದ್ದಾರ್ಥ್, ಸಿದ್ದರಾಜು ಇನ್ನು ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ಸದಾನಂದ ಕನ್ನೆಗಾಲ

error: