May 12, 2024

Bhavana Tv

Its Your Channel

ಶ್ರೀ ಕೋಟೆ ವಿಜಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ವಿಶೇಷ ಪೂಜೆ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ 5 ನೇ ವಾರ್ಡಿನಲ್ಲಿ ಇರುವ ಪ್ರಸಿದ್ಧ ಪುರಾತನ ದೇವಸ್ಥಾನವಾದ ಶ್ರೀ ಕೋಟೆ ವಿಜಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ವಿಶೇಷ ಪೂಜೆ ಭಕ್ತ ಸಾಗರದೊಂದಿಗೆ ನಡೆಯಿತು.

ಮುಂಜಾನೆಯಿAದಲೇ ನೂರಾರು ಸಂಖ್ಯೆಯ ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ಇಂದು ವರ್ಷದ ಮೊದಲನೇ ಉತ್ತರಾಯಣ ದಿನವಾದ ಸ್ವರ್ಗದ ಬಾಗಿಲು ತೆರೆಯುವ ಮೊದಲನೇ ದಿನದ ಅಂಗವಾಗಿ ಪಟ್ಟಣದ ಸೇರಿದಂತೆ ಸುತ್ತಮುತ್ತಲ ಗ್ರಾಮದ ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು. ಮುಂಜಾನೆಯಿAದಲೇ ದೇವರ ವಿಗ್ರಹಕ್ಕೆ ಹಲವು ಬಗೆಯ ಅಭಿಷೇಕಗಳು ನೆರವೇರಿಸಿ ವಿಶೇಷ ಬಗೆಯ ಹೂಗಳಿಂದ ದೇವರ ಮೂರ್ತಿಯನ್ನು ಅಲಂಕರಿಸಲಾಗಿತ್ತು. ದೇವಸ್ಥಾನದ ವತಿಯಿಂದ ಭಕ್ತಾದಿಗಳಿಗಾಗಿ ಸ್ವರ್ಗದ ಬಾಗಿಲು ಪ್ರವೇಶಿಸಲು ವಿಶೇಷವಾದ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿತ್ತು. ಹಾಗೂ ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತಾದಿಗಳಿಗೆ ದೇವಸ್ಥಾನದ ವತಿಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು,
ಪಟ್ಟಣದ ವಿಜಯ ನಾರಾಯಣ ಸ್ವಾಮಿ ದೇವಸ್ಥಾನ ಸೇರಿದಂತೆ ತಾಲೂಕಿನ ತೆರಕಣಾಂಬಿ ಗ್ರಾಮದ ಲಕ್ಷ್ಮಿ ವರದರಾಜ ಸ್ವಾಮಿ , ಹುಲಗನ ಮುರುಡಿ ವೆಂಕಟರಮಣ ಸ್ವಾಮಿ ಬೆಟ್ಟ , ಹಿಮವದ್ ಗೋಪಾಲಸ್ವಾಮಿ ಬೆಟ್ಟ ದಲ್ಲಿಯೂ ವೈಕುಂಠ ಏಕಾದಶಿಯ ಹಿನ್ನೆಲೆ ಇಂದು ವಿಶೇಷ ಪೂಜೆ ನಡೆಸಲಾಯಿತು.

ವರದಿ ; ಸದಾನಂದ ಕನ್ನೆಗಾಲ, ಗುಂಡ್ಲಪೇಟೆ

error: