May 10, 2024

Bhavana Tv

Its Your Channel

ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಗುದ್ದಲಿ ಪೂಜೆಯನ್ನು ನೆರವೇರಿಸಿದ ಶಾಸಕ ಎಸ್. ಎನ್. ಸುಬ್ಬಾರೆಡ್ಡಿ

ಬಾಗೇಪಲ್ಲಿ ಪಟ್ಟಣದ ೧೮ನೇ ವಾರ್ಡಿನ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಸಲುವಾಗಿ ಶಾಸಕರು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು. ೧೮ ನೇ ವಾರ್ಡಿನಲ್ಲಿ ರಸ್ತೆ ಸಂಪೂರ್ಣ ಮಣ್ಣಾಗಿದ್ದು, ಗುಣಿಗಳಿಂದ ಕೂಡಿದೆ ಇದರಿಂದ ಮಳೆ ನೀರು ಶೇಖರಣೆಯಾಗಿ ವಾಹನ ಸಂಚಾರ,ಜನಸAಚಾರ ಮಾಡಲು ಕಷ್ಟಕರವಾಗಿದೆ.ಇದನ್ನು ವೀಕ್ಷಿಸಿದ ಶಾಸಕರು ಡಾಂಬರೀಕರಣ ಕಾಮಗಾರಿ ಆರಂಭಿಸಿ ರಸ್ತೆ ಸಿದ್ಧಪಡಿಸಲು ಹಾಗೂ ಈ ವಾರ್ಡ್ ನಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್‌ಎಸ್ ನರೇಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ನಂಜುAಡಪ್ಪ, ಕೆ. ಡಿ. ಪಿ. ಸದಸ್ಯ ಅಮರನಾಥ ರೆಡ್ಡಿ , ಪುರಸಭೆಯ ಉಪಾಧ್ಯಕ್ಷ ಶ್ರೀನಿವಾಸ್, ೧೮ನೇ ವಾರ್ಡ್ ಪುರಸಭೆ ಸದಸ್ಯರಾದ ಹಸೀನಾ ಮನ್ಸೂರ್, ಶಬಾನಾ ಪರ್ವೀನ್, ಶ್ರೀನಿವಾಸರೆಡ್ಡಿ, ಜಬಿವುಲ್ಲಾ ಖಾನ್, ಅಶೋಕ್ ರೆಡ್ಡಿ, ಶ್ರೀನಾಥ್, ಜಾಮಿಯಾ ಮಸೀದಿಯ ಅಧ್ಯಕ್ಷ ಜಮೀರ್ ಅಹಮ್ಮದ್, ಅಲ್ಪಸಂಖ್ಯಾತ ತಾಲ್ಲೂಕು ಅಧ್ಯಕ್ಷ ನಿಜಾಮುದ್ದಿನ್ ಬಾಬು , ಡಿ. ಸಿ. ಸಿ. ಜಿಲ್ಲಾ ಕಾರ್ಯದರ್ಶಿ ಅನ್ಸರ್ ಪಾಷ, ಶ್ರೀನಾಥ್ (ಅಮ್ಮು) ಸೋಷಿಯಲ್ ಮೀಡಿಯಾ ಜಾಯಿಂಟ್ ಕೋ ಆರ್ಡಿನೆಟರ್, ಪ್ರಕಾಶ್ ಹಾಗೂ ಇನ್ನೂ ಮುಂತಾದ ಪ್ರಮುಖರು ಹಾಜರಿದ್ದರು.
ಗೋಪಾಲ ರೆಡ್ಡಿ ಬಾಗೇಪಲ್ಲಿ

error: