ಬಾಗೇಪಲ್ಲಿ ತಾಲ್ಲೂಕು ಪಾತಪಾಳ್ಯ ಹೋಬಳಿ ತೋಳ್ಳಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಶಾಸಕ ಸುಬ್ಬಾರೆಡ್ಡಿ ಭೂಮಿ ಪೂಜೆ ಮಾಡಿ ಚಾಲನೆ ನೀಡಿದರು,
ನಂತರ ಮಾತನಾಡಿ ರಾಜಕೀಯ ಸೇವೆಗಿಂತ ನನಗೆ ಜನರ ಸೇವೆ ತೃಪ್ತಿ ತಂದಿದೆ ನಾನು ಯಾವಾಗಲೂ ಎಂ.ಎಲ್.ಎ. ಸೀಟ್ ಗೆ ಅಂಟಿಕೊAಡಿರುವನಲ್ಲ ,ನನಗೆ ಸಾಮಾಜಿಕ ಸೇವೆ ಮುಖ್ಯ ,ಕರೋನ ಮೊದಲನೇ ಅಲೆ ಮತ್ತು ಎರಡನೇ ಅಲೆ ಶಾಸಕರು ಏನು ಕೆಲಸ ಮಾಡಿಲ್ಲ ಎನ್ನುವುದು ವಿರೋಧಿಗಳ ಹೇಳುತ್ತಿದ್ದಾರೆ, ಕರೋನ ಸಂದರ್ಭದಲ್ಲಿ ಬಡವರಿಗೆ ಮೂರು ತಾಲ್ಲೂಕಿನಲ್ಲಿ ಉಚಿತ ಅನ್ನ ದಾನ ಪ್ರತಿ ವರ್ಷ ೧೦೧ ಸಾಮೂಹಿಕ ಮದುವೆ ಅವರ ಜೀವನದ ನಿರ್ವಹಣೆಗೆ ಸೀಮೆ ಹಸು, ಮೂರು ತಾಲ್ಲೂಕಿಗೆ ಪ್ರತಿ ಮನೆ ಬಾಗಿಲಗೆ ೧ಲಕ್ಷ೧೦ಸಾವಿರ ದಿನಸಿ ಕಿಟ್ ವಿತರಣೆ, ಪ್ರತಿ ತಿಂಗಳು ಉಚಿತ ಆರೋಗ್ಯ ಶಿಬಿರ ಹಾಗೂ ಕಣ್ಣಿನ ಶಸ್ತ್ರಚಿಕಿತ್ಸೆ, ಈ ಎಲ್ಲಾ ಜನ ಸೇವೆಯಲ್ಲಿ ತೊಡಗಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲ್ಲೂಕು ಪೆದ್ದತುಮ್ಕೆಪಲ್ಲಿ ಗ್ರಾಮದ ದೇವಸ್ಥಾನ ಜೀರಣೊದ್ದಾರ ಕಾಮಗಾರಿ , ಬೈರೇಪಲ್ಲಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ನಂತರ ಅಡವಿ ಕೊತ್ತೂರು ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಬಿತ್ತನೆ ಬೀಜ ವಿತರಣೆ ,ಚೇಳೂರು ಗ್ರಾಮದಲ್ಲಿ ೫೦೦ ಲಕ್ಷ ವೆಚ್ಚದ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣ ಮಾಡಲು ಗುದ್ದಲಿ ಪೂಜೆ ,ತೋಳ್ಳಪಲ್ಲಿ ಗ್ರಾಮದ ಶಕ್ತಿ ದೇವತೆ ಆಗಟಿಮಡಕಮ್ಮ ದೇವಾಲಯ ಮುಂದೆ ಕೊಳವೆ ಬಾವಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯ ಅಮರನಾಥ್ ರೆಡ್ಡಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬೂರಗಮಡುಗು ನರಸಿಂಹಪ್ಪ, ಟಿ. ಶ್ರೀನಿವಾಸ್, ತಾಲ್ಲೂಕ್ ಪಂಚಾಯತಿ ಮಾಜಿ ಸದಸ್ಯ ಕೆ.ಕೆ.ವೆಂಕಟೇಶ್,ಪಿ.ಎಲ್.ಡಿ.ಬ್ಯಾAಕ್ ಸದಸ್ಯ ಜಿ.ಗಂಗುಲರೆಡ್ಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ನರೇಂದ್ರ. ಮುಖಂಡರು ಭಾಗವಹಿಸಿದ್ದರು.
ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ
More Stories
ಬಾಗೇಪಲ್ಲಿ ಕ್ಷೇತ್ರದ 3 ಲಕ್ಷ ನಾಗರೀಕರಿಗೆ ಪೂರ್ಣ ಪ್ರಮಾಣದಲ್ಲಿ ಉಚಿತ ಹೆಲ್ತ್ ಕಾರ್ಡ್ ವಿತರಣೆ
ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಿಂದ ರಕ್ಷಾ ಬಂಧನ ಆಚರಣೆ
ಗುರಿ ಮುಟ್ಟಬೇಕು ಎನ್ನುವ ಛಲ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು- ಡಾ. ಎ.ಹೆಚ್.ರಾಮರಾವ್