April 26, 2024

Bhavana Tv

Its Your Channel

೨೦೨೦-೨೧ನೇ ಸಾಲಿಗೆ ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ, ಇಂದಿರಾ ಗಾಂಧಿ, ಡಾ|| ಬಿ.ಆರ್. ಅಂಬೇಡ್ಕರ್, ಅಟಲ್ ಬಿಹಾರಿ ವಾಜಪೇಯ್ ವಸತಿ ಶಾಲೆಗಳಿಗೆ ೬ನೇ ತರಗತಿಯ ಪ್ರವೇಶ ಪರೀಕ್ಷೆಗೆ ಅರ್ಜಿಯನ್ನು ಆಹ್ವಾನ

ಅರ್ಜಿ ಸಲ್ಲಿಸಲು ಬರುವಾಗ ವಿದ್ಯಾರ್ಥಿಯು ಓದುತ್ತಿರುವ ಶಾಲೆಯ ಸ್ಟಾಟ್ಸ್ನಲ್ಲಿ ವಿದ್ಯಾರ್ಥಿ ಮಾಹಿತಿ (ಜಾತಿ, ಉಪ ಜಾತಿ)ಯನ್ನು ಕಡ್ಡಾಯವಾಗಿ ಅಪ್‌ಡೇಟ್ ಆಗಿರಬೇಕು, ವಿದ್ಯಾರ್ಥಿ ಸ್ಟಾಟ್ಸ್ ನಂಬರ್‌ನೊAದಿಗೆ ಶಾಲಾ ದೃಢೀಕರಣ ಪತ್ರ, ಚಾಲ್ತಿಯಲ್ಲಿರುವ ವಿದ್ಯಾರ್ಥಿಯ ಆರ್.ಡಿ.ನಂಬರ್ ಹೊಂದಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ಮೊಬೈಲ್ ನಂಬರ್, ವಿದ್ಯಾರ್ಥಿಯ ಇತ್ತೀಚಿನ ೨ ಪೋಟೋಗಳೊಂದಿಗೆ ಸಮೀಪದ ಯಾವುದೇ ವಸತಿ ಶಾಲೆಗೆ ಬಂದು ಮಾ.೧೨ ರಿಂದ ಎ.೦೩ರ ತನಕ ಶಾಲಾ ಕಛೇರಿಯ ಅವಧಿಯಲ್ಲಿ ಅರ್ಜಿಸಲ್ಲಿಸ ಬಹುದಾಗಿದೆ. ಪ್ರವೇಶ ಪರೀಕ್ಷೆಯು ಮೇ.೦೬ರಂದು ಬುಧವಾರ ನಡೆಯಲಿದ್ದು ೪ ಮತ್ತು ೫ನೇ ತರಗತಿಯ ಪಠ್ಯದ ಮೇಲೆ ೧೦೦ ಅಂಕದ ಪರೀಕ್ಷೆ ನಡೆಯುತ್ತದೆ ಎಂದು ಭಟ್ಕಳದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರು ಕೋರಿದ್ದಾರೆ.

error: