March 22, 2024

Bhavana Tv

Its Your Channel

ಕರೋನಾ ಎಫೆಕ್ಟ ಗೇರುಸೊಪ್ಪಾ ವಿರಾಂಜನೇಯ ಸನ್ನಿದಿಯಲ್ಲಿ ಮಲೆನಾಡು ಉತ್ಸವ ರದ್ದು, ವರ್ಷಪ್ರತಿಯಂತೆ ದೇವಸ್ಥಾನದ ಜಾತ್ರೆ ಮಾತ್ರ ನಡೆಯಲಿದೆ ಎಂದು ಂಸ್ಥಾನದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ವಿಶ್ವವೀರಾಂಜನೇಯ ಮಹಾಸಂಸ್ಥಾನಮ್, ಹೇಮಪುರ ಮಹಾಪೀಠಮ್ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಪ್ರತಿ ವರ್ಷದಂತೆ ನಡೆಯುವ ಶ್ರೀರಾಮನವಮಿ, ಶರಾವತಿ ಕುಂಭ, ಸಂಸ್ಕೃತಿಕುAಭ, ಮಲೆನಾಡ ಉತ್ಸವ-೨೦೨೦, ಶ್ರೀನಿವಾಸ ಕಲ್ಯಾಣ್ಯೋತ್ಸವ, ಪುಷ್ಪ ರಥೋತ್ಸವ, ಬ್ರಹ್ಮ ರಥೋತ್ಸವ ಈ ಕಾರ್ಯಕ್ರಮವು ಇದೇ ಬರುವ ಏಪ್ರಿಲ್ ೨ರಿಂದ ೮ರವರೆಗೆ ಅಂದರೆ ರಾಮನವಮಿಯಿಂದ ಹನುಮಜಯಂತಿಯವರೆಗೆ ನಡೆಸಲು ನಿರ್ಧರಿಸಲಾಗಿತ್ತು ಆದರೆ, ದೇಶದಾದ್ಯಂತ ಕೋವಿಡ್-೧೯ (ಕರೋನಾ ವೈರಸ್) ಮಹಾಮಾರಿ ರೋಗವು ವಿಶೇಷವಾಗಿ ಹಬ್ಬುತ್ತಿರುವುದರಿಂದ ಉತ್ಸವದ ಸಮಯದಲ್ಲಿ ಸಹಸ್ರಾರು ಭಕ್ತರು ಸೇರುವ ಕಾರಣದಿಂದ, ಈ ವೈರಸ್‌ನಿಂದ ತೊಂದರೆ ಉಂಟಾಗಬಹುದೆAದು ಮುಂಜಾಗೃತ ಕ್ರಮವಾಗಿ ಈ ವರ್ಷದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಕೇವಲ ರಥೋತ್ಸವ ಕಾರ್ಯಕ್ರಮವನ್ನು ಮಾತ್ರ ಅತಿ ಸರಳವಾಗಿ ಶಾಸ್ತೊçÃಕ್ತವಾಗಿ ನಡೆಸಲು ತೀರ್ಮಾನಿಸಿದ್ದೇವೆ. ಕಾರಣ ಶ್ರೀಕ್ಷೇತ್ರದ ಸಮಸ್ತ ಭಕ್ತರು ಹಾಗೂ ಕಲಾವಿದರು ಸಹಕರಿಸಬೇಕಾಗಿ ವಿನಂತಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ,

error: