March 25, 2024

Bhavana Tv

Its Your Channel

ಉತ್ತರಾಖಂಡದ ಹರಿದ್ವಾರದಿಂದ ಸೈಕಲ್ ಮೇಲೆ ಭಾರತ ಯಾತ್ರೆ

ಸ್ವಚ್ಛತೆಯಿಂದ ಮಾತ್ರ ಆರೋಗ್ಯ, ಕಸವನ್ನು ಎಲ್ಲೆಂದರಲ್ಲಿ ಎಸೆಯದೇ ಡಸ್ಟಬಿನ್ಗಳ ಬಳಕೆ ಮಾಡಿ ಎಂಬ ಸಂದೇಶದೊAದಿಗೆ ಉತ್ತರಾಖಂಡದ ಹರಿದ್ವಾರದಿಂದ ಸೈಕಲ್ ಮೇಲೆ ಭಾರತ ಯಾತ್ರೆ ಹೊರಟು ೧೮ ರಾಜ್ಯಗಳನ್ನು ಸುತ್ತಿ ಬಂದಿರುವ ಲೂಯಿಸ್ ದಾಸ್ ಎಂಬವರು ಮಂಗಳವಾರ ಕುಮಟಾಕ್ಕೆ ಆಗಮಿಸಿದ್ದಾರೆ

ಹರಿದ್ವಾರದ ಪೈಲಟ್ ಬಾಬಾ ಆಶ್ರಮದಲ್ಲಿ ಸೇವೆ ಸಲ್ಲಿಸುತ್ತಿರುವ ದಾಸ್ ಅವರು ಕಳೆದ ವರ್ಷ ಅಕ್ಟೋಬರ್ ೩೦ ರಂದು ಜನಸಾಮಾನ್ಯರಿಗೆ ಸ್ವಚ್ಛತೆಯ ಸಂದೇಶವನ್ನು ಹರಡುವ ಯೋಚನೆಯೊಂದಿಗೆ ಭಾರತ ಯಾತ್ರೆ ಹೊರಟರು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದನ್ನು ತಪ್ಪಿಸಲು ಡಸ್ಟ್ಬಿನ್‌ಗಳನ್ನು ಬಳಸುವ ಸಂದೇಶದೊAದಿಗೆ ಅವರು ತಮ್ಮ ಸೈಕಲ್ ಗೆ ಫ್ಲೆಕ್ಸ್ ಬೋರ್ಡ್ ಹಾಕಿದ್ದಾರೆ. ತಮ್ಮ ಯಾತ್ರೆಯಲ್ಲಿ ಪ್ರತಿನಿತ್ಯ ಬೆಳಿಗ್ಗೆ ೭ ಗಂಟೆಗೆ ಸೈಕ್ಲಿಂಗ್ ಪ್ರಾರಂಭಿಸುತ್ತಾರೆ ಮತ್ತು ರಾತ್ರಿ ೮ ಗಂಟೆಯವರೆಗೆ ಸೈಕಲ್‌ಗಳನ್ನು ಮಧ್ಯಂತರ ವಿರಾಮಗಳೊಂದಿಗೆ ನಡೆಸುತ್ತಾರೆ.
ಅವರು ಉತ್ತರ ಪ್ರದೇಶ, ಬಿಹಾರ, ಸಿಕ್ಕಿಂ, ತ್ರಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸ್‌ಗಡ, ಪುದುಚೇರಿ, ತಮಿಳುನಾಡು, ಕೇರಳ ದಾಟಿ ಕರ್ನಾಟಕಕ್ಕೆ ತಲುಪಿದ್ದಾರೆ. ರೈಲ್ವೆ ನಿಲ್ದಾಣಗಳು, ಪೆಟ್ರೋಲ್ ಪಂಪ್‌ಗಳು, ಆಶ್ರಮಗಳು, ದೇವಾಲಯಗಳು, ಆಸ್ಪತ್ರೆಗಳು, ಅಂಗಡಿಗಳು ಮತ್ತು ಪೊಲೀಸ್ ಠಾಣೆಗಳಲ್ಲಿ ರಾತ್ರಿ ವಸತಿ ಮಾಡುತ್ತಾರೆ.
ಸ್ವಚ್ಛತೆಯ ಸಂದೇಶವು ಸರಳವಾಗಿದ್ದರೂ ಜನರು ಅದನ್ನು ಕಡೆಗಣಿಸುತ್ತಾರೆ. ಈ ಬಗ್ಗೆ ಜನಜಾಗೃತಿ ಮೂಡಿಸಲು ಭಾರತದ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವನ್ನು ತಲುಪುವ ಗುರಿಯೊಂದಿಗೆ ಯಾತ್ರೆ ನಡೆದಿದೆ. ಆರೋಗ್ಯಕ್ಕಾಗಿ ಸ್ವಚ್ಛತೆ ಬೇಕು. ಕಸವನ್ನು ಎಲ್ಲೆಂದರಲ್ಲಿ ಎಸೆಯುವುದು ಜೀವಜಗತ್ತಿಗೇ ಮಾರಕ. ಈ ಬಗ್ಗೆ ಚಿಕ್ಕ ಮಕ್ಕಳಿಗೂ ಮಾಹಿತಿ ಕೊಡುವ ಉದ್ದೇಶದಿಂದ ಯಾತ್ರೆಯ ಮಧ್ಯದಲ್ಲಿ ಸನಿಹದ ಶಾಲೆಗಳಿಗೆ ಹೋಗಿ ಉಪನ್ಯಾಸ ನೀಡಿದ್ದೇನೆ ಎಂದು ದಾಸ್ ಹೇಳಿದ್ದಾರೆ.
ತನ್ನ ಪ್ರಯಾಣದ ಅವಧಿಯಲ್ಲಿ ಹಾದುಹೋದ ಸ್ಥಳಗಳಲ್ಲಿ ಸಾಕಷ್ಟು ಕಸವನ್ನು ಕಂಡಿದ್ದೇನೆ. ಡಸ್ಟ್ಬಿನ್ ಬಳಕೆ ತೀರಾ ಕಡಿಮೆ. ಜನರು ಎಲ್ಲಿಯಾದರೂ ಮತ್ತು ಎಲ್ಲೆಡೆ ಕಸವನ್ನು ಎಸೆಯುತ್ತಾರೆ. ಈ ಸ್ಥಿತಿಯನ್ನು ಬದಲಿಸಬೇಕಿದೆ ಎಂದು ಲೂಯಿಸ್ ದಾಸ್ ಹೇಳಿದ್ದಾರೆ

error: