ರಾಜ್ಯದ ವಿವಿಧಡೆ ಮ್ಯಾಕ್ಸಿ ಕ್ಯಾಬ್ ಚಾಲಕರು ೧೨+೧ರಂತೆ ವಾಹನ ಚಲಾಯಿಸುತ್ತಿದ್ದರು ಇದರಿಂದ ಇವರಿಗೆ ಹೊರೆಯಾಗುತ್ತಿತ್ತು. ಈ ಬಗ್ಗೆ ಕಾರವಾರ ಶಾಸಕಿ ರೂಪಾಲಿ ನಾಯ್ಕ ಅಧಿವೇಶನದಲ್ಲಿ ಪ್ರಶ್ನಿಸಿ ಕಾರವಾರ ಒಂದರಲ್ಲಿ ೨೬ ಸಾವಿರ ದಂಡ ವಸೂಲಿ ಮಾಡಲಾಗಿದೆ ಇದರಿಂದ ಅವರಿಗೆ ಜೀವನ ನಿರ್ವಹಣೆಗೆ ಹೊಡೆತ ಬಿಳಲಿದೆ ಸರ್ಕಾರ ಇದಕ್ಕೆ ತಿದ್ದುಪಡಿ ನಡೆಸಿ ೧೯+೧ ಕ್ಕೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಇದೆ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಶಾಸಕ ರಘುಪತಿ ಭಟ್ ಮಾತನಾಡಿ ಇದು ಇಡೀ ರಾಜ್ಯದ ಸಮಸ್ಯೆ ಈ ಬಗ್ಗೆ ಸೂಕ್ತ ನ್ಯಾಯ ದೊರಕಬೇಕು ಈಗಾಗಲೇ ನಿಯೋಗವನ್ನು ಮುಖ್ಯಂತ್ರಿ ಸಾರಿಗೆ ಸಚೀವರಿಗೆ ಭೇಟಿ ಮಾಡಲಾಗಿದೆ. ೯೦೦ ರೂಪಾಯಿಗೆ ನಿಗಧಿ ಮಾಡಿದ ಶುಲ್ಕವನ್ನು ೬೦೦ಕ್ಕೆ ಇಳಿಸಬೇಕು. ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಚೀವರು ಈ ಬಗ್ಗೆ ಮುಖ್ಯಮಂತ್ರಿಗಳೊAದಿಗೆ ತಿರ್ಮಾಸುವ ಭರವಸೆ ನೀಡಿದರು
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.