
ಭಟ್ಕಳ ತಾಲೂಕಿನ ಬಲ್ಸೆ, ತುದಳ್ಳಿ, ನರೆಕುಳಿ, ಕೊಡ್ಸುಳು, ಗುಡಿಗಾರ್ ಬೊಳೆ, ಜನತಾಕಲೋನಿ, ಬೈಲೂರು, ಆಚಾರಿಕೇರಿ, ನಾಡವರಕೇರಿ, ವೆಂಕಟಾಪುರ, ಗುಡಿಹಿತ್ತಲು, ಮೂಡಶಿರಾಲಿ, ಸೊನಾರಕೇರಿ, ಡಿ. ಪಿ ಕಲೋನಿ, ಜೋಗಿಮನೆ, ಕಾಸ್ಮೋಡಿ, ಚೌತನಿ ಕುದರೆ ಬೀರಪ್ಪ ದೇವಸ್ಥಾನ ಈ ಎಲ್ಲಾ ಭಾಗಗಳಲ್ಲಿನ ಕಡುಬಡವರ ಮಾಹಿತಿಯನ್ನು ಬೂತ್ ಮಟ್ಟದ ಕಾರ್ಯಕರ್ತರ ಮುಖಾಂತರವಾಗಿ ಕಲೆಹಾಕಿ ೮೮೨ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ಕಾರ್ಯಕರ್ತರ ಮುಖೆನವಾಗಿ ತಲುಪಿಸಲಾಯಿತು. ಈ ಜನಸೇವಾ ಕಾರ್ಯಕ್ಕೆ ಸಹಾಯಾರ್ಥವಾಗಿ ಆರ್ ಎನ್ ಎಸ್ ಸಮೂಹ ಸಂಸ್ಥೆ ಮುರ್ಡೇಶ್ವರ ಇವರ ವತಿಯಿಂದ ೧ ಲಕ್ಷ ರೂಪಾಯಿ ಮೌಲ್ಯದ ಅಕ್ಕಿ ಮತ್ತು ಬೆಳೆಯನ್ನು ನೀಡಿದ್ದು ಆ ಸಾಮಾಗ್ರಿಗಳನ್ನು ಎಲ್ಲಾ ಕಡುಬಡವರಿಗೆ ತಲುಪಿಸಲಾಗುತ್ತಿದೆ ಎಂದು ಶಾಸಕ ಸುನಿಲ ನಾಯ್ಕ ಮಾದ್ಯಮಕ್ಕೆ ತಿಳಿಸಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.