
ಕುಮಟಾ : ಪ್ರಧಾನ ಮಂತ್ರಿ ಜನ್ ಧನ್ ಖಾತೆಗೆ ಕೇಂದ್ರ ಸರ್ಕಾರ ದಿಂದ ೫೦೦ ರೂ ಜಮಾ ಮಾಡಲಾದ ಹಣ ಪಡೆಯಲು ಮಹಿಳೆಯರು ಬ್ಯಾಂಕ್ ಎದುರು ಪರದಾಡುತ್ತಿರುವ ದೃಶ್ಯ ಗುರುವಾರ ಕುಮಟಾದಲ್ಲಿ ಕಂಡು ಬಂತು.
ಕೋವಿಡ್೧೯ ನಿಮಿತ್ತ ಸಂಪೂರ್ಣ ಭಾರತ ಲಾಕ್ ಡೌನ್ ಅದ ಹಿನ್ನೆಲೆಯಲ್ಲಿ ಬಡ ಜನತೆ ಸಂಕಷ್ಟ ಅನುಭವಿಸಬಾರದೆಂಬ ಸದುದ್ದೇಶ ಹೊಂದಿ ಪ್ರಧಾನಿ ನರೇಂದ್ರ ಮೋದಿಯರು ಜನ್ ಧನ್ ಖಾತೆ ಹೊಂದಿರುವವರಿಗೆ ತಲಾ ೫೦೦ ರೂ ಗಳನ್ನು ಅವರವರ ಬ್ಯಾಂಕ್ ಗಳಿಗೆ ಜಮಾ ಮಾಡಲಾಗಿತ್ತು. ಬ್ಯಾಂಕ್ ನಲ್ಲಿ ಜಮಾ ಅದ ಹಣವನ್ನು ತಕ್ಷಣ ಪಡೆದುಕೊಳ್ಳದಿದ್ದಲ್ಲಿ ಹಣ ಮರಳಲಿದೆ ಎನ್ನುವ ವದಂತಿ ಹಬ್ಬಿದ್ದರಿಂದ ಮಹಿಳೆಯರು ಕಂಗಾಲಾಗಿ ಬ್ಯಾಂಕ್ ಗಳ ಎದುರು ಮುಗಿಬಿದ್ದರು. ಇದರಿಂದಾಗಿ ಕೆಲ ಸಮಯ ಉದ್ವಿಘ್ನ ವಾತಾವರಣ ನಿರ್ಮಾಣವಾಯಿತು. ತಕ್ಷಣ ಪೊಲೀಸ್ರು ಸ್ಥಳಕ್ಕೆ ಆಗಮಿಸಿ ಮಹಿಳೆಯರ ಮನವಲಿಸಿದರು. ಯಾವುದೇ ಕಾರಣಕ್ಕೂ ನಿಮ್ಮ ಖಾತೆಗೆ ಜಮಾ ಆದ ಹಣ ಮರಳುವುದಿಲ್ಲ. ಯಾರೊಬ್ಬರೂ ಆತಂಕ ಪಡುವುದು ಬೇಡ. ಆದರೆ ಬ್ಯಾಂಕ್ ಎದುರು ಗುಂಪುಗೂಡಿ ನಿಲ್ಲ ಬಾರದು ಸಾಮಾಜಿಕ ಅಂತರ ಕಾಯ್ದುಕೊಂಡು ನಿಮ್ಮ ಹಣ ಪಡೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. ಇದರಿಂದ ಮಹಿಳೆಯರು ಸಮಾಧಾನಗೊಂದು ಹಣ ಪಡೆದುಕೊಂಡರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.