April 26, 2024

Bhavana Tv

Its Your Channel

ವೀರಯೋಧ ಶಿವುಕುಮಾರ ಗೋವಿಂದ ಗೌಡರಿಗೆ ಭವ್ಯ ಸ್ವಾಗತ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಗೆದಾಳ ಗ್ರಾಮದ ವೀರಯೋಧ ಶಿವುಕುಮಾರ ಗೋವಿಂದ ಗೌಡ ತೆಗ್ಗಿನಮನಿ ಇವರು ಇವರು ದೇಶ ಸೇವೆ ಮುಗಿಸಿ ನಿವೃತ್ತರಾಗಿ ತವರಿಗೆ ಆಗಮಿಸಿರುವ ಹಿನ್ನೆಲೆ , ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಹುನಗುಂದ ಇವರ ವತಿಯಿಂದ ಹಾಗೂ ಹಗೇದಾಳ ಗ್ರಾಮದ ನಾಗರಿಕರಿಂದ ಸನ್ಮಾನ ಸಮಾರಂಭ ಜರುಗಿತು

ಬೆಳಿಗ್ಗೆ 9:00 ಘಂಟೆಗೆ ಹುನಗುಂದ ನಗರದಲ್ಲಿ ಸ್ಟೇಡಿಯಂ ನಿಂದ ರಾಮವಾಡಗಿ ಕ್ರಾಸ ವರೆಗೆ ವೀರ ಯೋಧನ ಮೇರವಣಿಗೆ ನಡೆಯಿತು, ನಂತರ ಸಾಯಂಕಾಲ 4:00 ಘಂಟೆಗೆ ಹುನಗುಂದ ತಾಲೂಕ ಹಗೇದಾಳ ಗ್ರಾಮದಲ್ಲಿ ವೀರಯೋಧನಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು . ಕಾರ್ಯಕ್ರಮಕ್ಕೆ ಆಗಮಿಸಿದ ದಿವ್ಯ ಸಾನಿಧ್ಯ, ಪೂಜ್ಯ ಶ್ರೀ ಶ್ರೀ ಮ ನಿ ಪ್ರ ಗುರು ಮಹಾಂತ ಸ್ವಾಮಿಗಳು, ಸಾನಿಧ್ಯ, ಗುರು ಕುಲ ಭೂಷಣ ಶ್ರೀ ಷ ಬ್ರ ವಿಶ್ವಾರಾಧ್ಯ ಮಳೆಂದ್ರ ಶಿವಾಚಾರ್ಯರು, ಪೂಜ್ಯ ಶ್ರೀ ಕಲ್ಲಿನಾಥ ದೇವರು, , ಶ್ರೀ ಗುರು ಮಹಾಂತಯ್ಯ ಶೇ ಹೀರೆಮಠ , ಅಧ್ಯಕ್ಷತೆ ಬಾಲಪ್ಪ ಕಂ ಕಿರಸೂರ , ಚಂದ್ರಶೇಖರಯ್ಯ ಸೌಡಿ ಉಪನ್ಯಾಸಕರು, ಎಸ್ ಆರ್ ಗೊಲಗೋಂಡ, ಶಿವಪ್ಪ ಯಡಹಳ್ಳಿ, ಶ್ರೀ ರಾಘವೇಂದ್ರ ಓಬಳೆಪ್ಪನವರ್, ನಾಗಪ್ಪ ಆಲೂರು ಹಾಗೂ ಮಾಜಿ ಸೈನಿಕರು ಹಗೇದಾಳ ಮತ್ತು ಘಟ್ಟಿಗನೂರ ಗ್ರಾಮದ ಗುರು ಹಿರಿಯರು ಪಾಲ್ಗೊಂಡಿದ್ದರು,

ವೀರಯೋಧ ಶಿವುಕುಮಾರ ಗೋವಿಂದ ಗೌಡ ತೆಗ್ಗಿನಮನಿ ಇವರ ತಂದೆ ತಾಯಿಗೆ ಸನ್ಮಾನ ಸಮಾರಂಭ ಮಾಡಲಾಯಿತು

error: