
ಕುಮಟಾ : ಕರೋನಾ ಮಹಾಮಾರಿಯಿಂದ ಒಂದಡೆ ದಿನಸಿ ಸೇರಿದಂತೆ ಇತರೆ ಅಗತ್ಯವಸ್ತುಗಳ ಸಾಮಗ್ರಿ ಕೊಳ್ಳಲು ಅನಾನೂಕೂಲದ ಪರಿಸ್ಥಿತಿ ಒಂದಡೆಯಾದರೆ ಇನ್ನೊಂದಡೆ ತಾವು ಬೆಳೆದ ಬೆಳೆಗಳು ಮಾರಾಟ ಮಾಡಲು ಪರಿಸ್ಥಿತಿ ಎಲ್ಲಡೆ ನಿರ್ಮಾಣವಾಗಿದೆ. ಅದರಲ್ಲೂ ತರಕಾರಿ ಬೆಳೆದು ಜೀವನ ನಡೆಸುವ ಗೋಕರ್ಣ ಭಾಗದ ಮಹಿಳೆಯಿಂದ ಪ್ರತಿನಿತ್ಯ ತರಕಾರಿ ಖರೀದಿಸಿ ಕ್ಷೇತ್ರದ ವಿವಿದಡೆ ಹಂಚಿಕೆ ಮಾಡುತ್ತಿರುವ ಶಾಸಕ ದಿನಕರ ಶೆಟ್ಟಿ ಇನ್ನೊಂದು ಹೆಜ್ಜೆ ಮುಂದಿಟ್ಟು ದಿನಸಿ ಸಾಮಗ್ರಿಗಳನ್ನು ವಿತರಣೆಮಾಡಲು ಮುಂದಾಗಿದ್ದಾರೆ. ತೀರಾ ಹಿಂದುಳಿದ ಬಡವರನ್ನು ಗುರುತಿಸಿ ಅಗತ್ಯವಸ್ತುಗಳನ್ನು ಕಿಟ್ ರೂಪದಲ್ಕಲಿ ತಯಾರಿಸಿ ಗ್ರಾಮಗಳಿಗೆ ಆಗಮಿಸಿ ವಿತರಣೆ ಮಾಡುತ್ತಿದ್ದಾರೆ. ಇದರಂತೆ ಹೊನ್ನಾವರ ತಾಲೂಕಿನ ಕಡತೋಕಾ ಪಂಚಾಯತ ವ್ಯಾಪ್ತಿಯ ೨೦೦ ಕುಟುಂಬಗಳಿಗೆ ಶುಕ್ರವಾರ ದಿನಸಿ ಸಾಮಗ್ರಿ ಕಿಟ್ ವಿತರಣೆ ಮಾಡಿ ಕರೋನಾ ಸುರಕ್ಷತೆಗಾಗಿ ಸರ್ಕಾರದ ನಿಯಮವನ್ನು ಪಾಲಿಸುವಂತೆ ಮನವಿ ಮಾಡಿದರು.
More Stories
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಭಟ್ಕಳದ ದಿ ನ್ಯೂ ಇಂಗ್ಲೀಷ ಪಿ ಯು ಕಾಲೇಜು ಶೇಕಡಾ 99.25% ಫಲಿತಾಂಶವನ್ನು ದಾಖಲಿಸಿದೆ.
ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ದಿನಕರ ಶೆಟ್ಟಿ ನಾಮಪತ್ರ ಸಲ್ಲಿಕೆ.
ದಾಖಲೆಯಿಲ್ಲದೆ ಸಾಗಿಸುತಿದ್ದ 51.20 ಲಕ್ಷ ನಗದು ವಶ