March 30, 2023

Bhavana Tv

Its Your Channel

ಸರ್ಕಾರ ಕರೋನಾ ಲಾಕಡೌನ್ ಸಂದರ್ಭದಲ್ಲಿ ಯಾವುದೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಲ್ಲ. – ಮಾಜಿ ಶಾಸಕ ಮಂಕಾಳ ವೈದ್ಯ

ಭಟ್ಕಳ ; ಮಹಾಮಾರಿ ಕರೋನಾದಿಂದ ದೇಶದಲ್ಲಿ ಜನಸಾಮಾನ್ಯರು ಸಂಕಷ್ಟಗೊಳಗಾಗಿದ್ದು ರಾಜ್ಯದಲ್ಲಿ ಸರ್ಕಾರ ಜನಸಾಮಾನ್ಯರಿಗೆ ಸ್ಪಂದಿಸುವ ಯಾವುದೇ ವಿಶೇಷ ಪ್ಯಾಕೇಜ್ ನೀಡಿಲ್ಲ ಎಂದು ಭಟ್ಕಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಂಕಾಳ ವೈದ್ಯರವರು ತಿಳಿಸಿದ್ದಾರೆ.
ಸನ್ಮಾನ್ಯ ಮುಖ್ಯಮಂತ್ರಿಗಳು ಕೃಷಿಕರಿಗೆ, ಕೂಲಿ ಕಾರ್ಮಿಕರಿಗೆ,ಮೀನುಗಾರಿಗೆ ಹಾಗೂ ನಿರ್ಗತಿಕರಿಗೆ ಅನುಕೂಲವಾಗುವಂತೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಮುಖ್ಯಮಂತ್ರಿ ಗಳಿಗೆ ಆಗ್ರಹಿಸಿದ್ದಾರೆ.
ಮೇ3ರ ನಂತರ ಲಾಕಡೌನ ಮುಗಿದರೆ ಉತ್ತಮ .ಒಂದೊಮ್ಮೆ ಮುಗಿಯದ್ದಿದ್ದರು ಯಾರು ಆತಂಕ ಪಡಬೇಡಿ. ಬಡವರೊಂದಿಗೆ ಸಂಕಷ್ಟದಲ್ಲಿದ್ದವರೊಂದಿಗೆ ಸದಾ ನಾನಿದ್ದೇನೆ ಎಂದು ತಿಳಿಸಿದ್ದಾರೆ.

ವಿಡಿಯೋ ವೀಕ್ಷಿಸಿ

About Post Author

error: