
ಭಟ್ಕಳ ನಗರವು ಕೊರೊನಾ ಹಾಟ್ಸ್ಪಾಟ್ ಎಂದು ಘೋಷಿಸಲ್ಪಟ್ಟು ದಿನದ ೧೮ ಗಂಟೆಗೂ ಹೆಚ್ಚು ಕೆಲಸವನ್ನು ಮಾಡಿದ ಪೊಲೀಸರು ತಮ್ಮ ಒತ್ತಡದ ನಡುವೆಯೂ ಕೂಡಾ ರಸ್ತೆ ಪಕ್ಕದಲ್ಲಿರುವ ಅನಾಥರು, ಬಡವರು ಹಾಗೂ ಬೇರೆ ಕಡೆಯಿಂದ ಬಂದು ರಸ್ತೆ ಪಕ್ಕದಲ್ಲಿ ಮಾರಾಟ ಮಾಡಿ ಜೀವನ ಸಾಗಿಸುತ್ತಿರುವವರಿಗೆ ಊಟ ಕೊಡುವ ಮೂಲಕ ತಮ್ಮ ಒತ್ತಡವನ್ನು ಕಡಿಮೆ ಮಾಡಿಕೊಂಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಸ್ವತಃ ಡಿ.ವೈ.ಎಸ್.ಪಿ. ಗೌತಮ್ ಕೆ.ಸಿ. ಹಾಗೂ ಅವರ ಇಲಾಖೆಯ ಸಹೋದ್ಯೋಗಿಗಳು ತಮಗಾಗಿ ತಯಾರಿಸಿಕೊಂಡಿದ್ದ ಊಟದಲ್ಲಿಯೇ ನಗರದಲ್ಲಿ ಅನೇಕ ಕಡೆಗಳಲ್ಲಿ ಇರುವವರಿಗೆ ನೀಡುತ್ತಿರುವುದು ಮಾತ್ರ ಮಾನವೀಯತೆಗೆ ಹಿಡಿದ ಕನ್ನಡಿಯಾಗಿದೆ. ಪೊಲೀಸರು ಕೇವಲ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವರಲ್ಲ, ಸಮಾಜ ಸಂಕಷ್ಟದಲ್ಲರುವಾಗ ಅವರ ನೆರವಿಗೂ ಬರುತ್ತಾರೆ ಎನ್ನುವುದನ್ನು ಈ ಮೂಲಕ ಡಿ.ವೈ.ಎಸ್.ಪಿ. ನೇತೃತ್ವದ ಪಡೆ ತೋರಿಸಿಕೊಟ್ಟಿದೆ. ಸಮಾಜಕ್ಕೊಂದು ಉತ್ತಮ ಸಂದೇಶವನ್ನು ಸಾರುತ್ತಿರುವ ಇವರ ಕಾರ್ಯ ನಾಗರೀಕರ ಪ್ರಶಂಸೆಗೊಳಗಾಗಿದೆ.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.