
ಹೊನ್ನಾವರ : ಪಟ್ಟಣದ ಬಜಾರ ರಸ್ತೆ ಹೂವಿನ ಚೌಕ ಸಮೀಪದಿಂದ ಎಮ್ಮೆಪೈಲ್ ಕ್ರಾಸ್ವರೆಗೂ ಬೀದಿ ನಾಯಿಗಳ ಅಬ್ಬರದಿಂದ ಸಾರ್ವಜನಿಕರು ಸಂಚಾರ ನಡೆಸಲು ಭಯಪಡುತ್ತಿದ್ದಾರೆ. ಈ ಮಧ್ಯೆ ಬುಧವಾರ ರಾತ್ರಿ ಬೀದಿನಾಯಿಗಳು ಆಕಳನ್ನು ಬೆನ್ನಟ್ಟಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಬೆಳಕಿಗೆ ಬಂದಿದ್ದು ನಾಯಿಗಳ ಹಾವಳಿಗೆ ಸಾರ್ವಜನಿಕರು ಹೈರಾಣಿಗಿದ್ದಾರೆ. ಲಾಕ್ ಡೌನ್ ಹಿನ್ನಲೆಯಲ್ಲಿ ಜನಸಂಚಾರ ವಿರಳವಿರುದರಿಂದ ಒರ್ವರೆ ಸಂಚಾರ ನಡೆಸಲು ಭಯಪಡುವ ಸ್ಥಿತಿ ಒಂದಡೆಯಾದರೆ ಇನ್ನೊಂದಡೆ ನಾಯಿಗಳಿಂದ ಆಕಳುಗಳ ಮೇಲೆ ದಾಳಿ ನಡೆದಿರುದರಿಂದ ಇನ್ನಷ್ಟು ಭಯಪಡುವಂತಾಗಿದೆ. ಆಕಳ ಮೇಲೆ ದಾಳಿಯಾಗುತ್ತಿರುದನ್ನು ಗಮನಿಸಿದ ಸ್ಥಳಿಯ ನಿವಾಸಿ ಶೇಖರ್ ನಾಯಿಗಳ ಗುಂಪುಗಳನ್ನು ಓಡಿಸಿ ಆಕಳಿಗೆ ಪ್ರಥಮ ಚಿಕಿತ್ಸೆ ಕೊಡಿಸುವ ಮೂಲಕ ನೆರವಾದರು. ಬಳಿಕ ಸ್ಥಳಿಯರಿಗೆ ಮಾಹಿತಿ ನೀಡಿ ವಾರಸುದಾರರನ್ನು ಪತ್ತೆಹಚ್ಚಲು ಪ್ರಯತ್ನಿಸಿದಾದರೂ ವಾರಸದಾರರು ಪತ್ತೆಯಾಗದ ಹಿನ್ನಲೆಯಲ್ಲಿ ಪಟ್ಟಣ ಪಂಚಾಯತ ಸದಸ್ಯ ವಿಜು ಕಾಮತ್ ಇವರಿಗೆ ಹಸ್ತಾಂತರಿಸಿದ್ದಾರೆ. ಸದಸ್ಯ ವಿಜುಕಾಮತ್ ತಮ್ಮ ಮನೆಗೆ ಕರೆದ್ಯೊಯ್ದಿದ್ದು ಆರೈಕೆ ಮಾಡುವುದಲ್ಲದೇ ವಾರಸುದಾರರು ಪತ್ತೆಯಾದ ಬಳಿಕ ಹಸ್ತಾಂತರಿಸುದಾಗಿ ತಿಳಿಸಿದ್ದಾರೆ. ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು ಸಾರ್ವಜನಿಕರಿಗೆ ಸಮಸ್ಯೆಯಾಗುವ ಪೂರ್ವದಲ್ಲಿ ಪಟ್ಟಣ ಪಂಚಾಯತಿ ಅಧಿಕಾರಿಗಳು ಮುಂದೆಯಾದರೂ ಎಚ್ಚೆತ್ತು ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.