April 25, 2024

Bhavana Tv

Its Your Channel

ಉತ್ತರ ಕರ್ನಾಟಕಕ್ಕೆ ಹೋಗೋ ಬಸ್ ಉತ್ತರ ಕನ್ನಡಕ್ಕೆ ಬಂತು!!

ಕಾರವಾರ: ಬೆಂಗಳೂರಿನಿಂದ ಪ್ರಯಾಣಿಕರನ್ನು ಕರೆದುಕೊಂಡು ಹೊರಟಿದ್ದ ಸುಮಾರು ಐದು ಬಸ್, ದಾವಣಗೆರೆ ಮಾರ್ಗವಾಗಿ ತೆರಳಿತ್ತು. ಆದರೆ, ದಾವಣಗೆರೆಯಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗಿರುವುದರಿಂದ ಪ್ರವೇಶ ನಿರ್ಬಂಧಿಸಲಾಗಿದೆ. ಇದರಿಂದಾಗಿ ಶಿವಮೊಗ್ಗ ಮಾರ್ಗದಲ್ಲಿ ಬಸ್ ಚಲಾಯಿಸಿದ ಡ್ರೈವರ್, ದಾರಿ ತಪ್ಪಿ ಕಾರವಾರಕ್ಕೆ ಬಂದು ತಲುಪಿದ್ದಾನೆ.

ಕಾರವಾರದ ಬಸ್ ನಿಲ್ದಾಣದಲ್ಲಿ ಕೆಲ ಹೊತ್ತು ಇದ್ದ ಬಸ್ ಚಾಲಕರು, ಬಳಿಕ ಸ್ಥಳೀಯ ಸಿಬ್ಬಂದಿಯ ಬಳಿ ಮಾರ್ಗಗಳ ಮಾಹಿತಿ ಪಡೆದು ಸುಮಾರು 7 ಗಂಟೆಯ ವೇಳೆಗೆ ಮರಳಿ ಉತ್ತರ ಕರ್ನಾಟಕದ ಭಾಗಕ್ಕೆ ತೆರಳಿದ್ದಾರೆ.

error: