
ಹೊನ್ನಾವರ; ತಾಲೂಕಿನ ಕರ್ಕಿ ಹೆಗಡೆಹಿತ್ತಲ ನಿವಾಸಿಗಳಾದ ಸುಬ್ರಾಯ ನಾರಾಯಣ ಮುಕ್ರಿ, ಸೂರಜ್ ಸುಬ್ರಾಯ ಮುಕ್ರಿ, ದರ್ಶನ ಮಂಜು ಮುಕ್ರಿ ಎನ್ನುವವರು ಮಂಗಳವಾರ ಮನೆಯ ಸಮೀಪದ ನದಿಯಲ್ಲಿ ಈಜಲು ತೆರಳಿದ್ದರು. ಈಜಾಡುತ್ತಾ ನದಿಯ ಮಧ್ಯಭಾಗಕ್ಕೆ ತೆರಳಿದ್ದು ನೀರಿನ ಸೆಳೆತಕ್ಕೆ ಸಿಲುಕಿ ಒದ್ದಾಡುತ್ತಿದ್ದಾಗ ಸ್ಥಳಿಯರು ಗಮನಸಿ ಸಹಾಯಕ್ಕೆ ದೋಣಿ ಮೂಲಕ ಧಾವಿಸಿದ್ದಾರೆ. ಈ ಸಂದರ್ಭದಲ್ಲಿ ನದಿಯಲ್ಲಿ ಒದ್ದಾಡುತ್ತಿದ್ದ ತಂದೆ ಮತ್ತು ಮಗನಾದ ಸುಬ್ರಾಯ ಮುಕ್ರಿ ಹಾಗೂ ಸೂರಜ್ ಇವರನ್ನು ರಕ್ಷಿಸಲಾಗಿದ್ದು ದರ್ಶನ್ ಎನ್ನುವಾತ ನಾಪತ್ತೆಯಾಗಿದ್ದಾನೆ. ದರ್ಶನ ೮ನೇ ತರಗತಿ ಅಧ್ಯಯನ ನಡೆಸುತ್ತಿದ್ದಾನೆ. ದರ್ಶನನಿಗಾಗಿ ಶೋಧ ಕಾರ್ಯ ಮುಂದುವರೆದಿದ್ದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಹೊನ್ನಾವರ ಅಫರಾಧ ವಿಭಾಗದ ಪಿಎಸೈ ಸಾವಿತ್ರಿ ನಾಯಕ ತಂಡದವರು ಧಾವಿಸಿ ಹುಡುಕಾಟ ನಡೆಸುತ್ತಿದ್ದಾರೆ.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.