ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಅಥ್ಲೇಟಿಕ್ ಅಶೋಸಿಯೇಶನ್ ವತಿಯಿಂದ 14 ವಯಸ್ಸಿನೊಳಗಿನ ಮಿನಿ ಒಲಂಪಿಕ್ಸ್ ಕ್ರೀಡಾಕೂಟ ಬೆಂಗಳೂರಿನ ಉದ್ಯಾನಗರಿ ಶ್ರೀ ಕಂಠೀರವ ಕ್ರೀಡಾಕೂಟದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯಿಂದ ಹೊನ್ನಾವರ ತಾಲೂಕಿನ ಆನಂದಾಶ್ರಮ ಬಂಕಿಕೊಡ್ಲ ಪ್ರೌಡಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಮುರ್ಕಂಡಿ ದಿನೇಶ ಗೌಡ ಎತ್ತರಜಿಗಿತದಲ್ಲಿ ಭಾಗವಹಿಸಿ ದ್ವೀತಿಯ ಪದಕ ಪಡೆಯುವ ಮೂಲಕ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾನೆ. ಇತನು ಅಧ್ವೈತ ಸ್ಪೊಟ್ರ್ಸ ಕ್ಲಬ್ ತರಬೇತಿ ಪಡೆದಿದ್ದು ರಾಘವೇಂದ್ರ ಮೇಸ್ತ ತರಬೇತಿ ನೀಡಿದ್ದರು. ಇವರ ಸಾಧನೆಗೆ ಜಿಲ್ಲೆ ಹಾಗೂ ತಾಲೂಕಿನ ವಿವಿಧ ಅಧಿಕಾರಿಗಳು ಶಾಲಾ ಶಿಕ್ಷಕರು ಅಭಿನಂದಿಸಿದ್ದಾರೆ.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.