
ಕುಮಟಾ : ತರಾತುರಿಯಲ್ಲಿ ಕಾಮಗಾರಿ 75% ಪೂರ್ಣವಾಗಿದೆ ಎಂದು ದಾಖಲಿಸಲು ಹೋಗಿ ಐ. ಆರ್. ಬಿಯ ಕಾಮಗಾರಿಯಿಂದ ಸಾಮಾನ್ಯ ಜನರು ಪ್ರಾಣ ಕಳೆದುಕೊಳ್ಳುವಂತೆ ಆಗಿದೆ.
ಹೌದು ಅವೈಜ್ಞಾನಿಕವಾಗಿ ರಸ್ತೆ ಪಕ್ಕದಲ್ಲಿ ಹೊಂಡ ತೋಡಿ, ರಾತ್ರಿ ಅದಕ್ಕೆ ಒಂದು ಸರಿಯಾದ ಭದ್ರತೆಯು ಒದಗಿಸದೆ ಹೋದ IRB ಯ ಸೋಗಲಾಡಿ ಅಧಿಕಾರಿಗಳ ವರ್ತನೆಗೆ, ಹಳದೀಪುರದ ಬಡ್ನಿಕೇರಿಯ ಲಕ್ಷ್ಮಿ ಕಣಿಯ ಮುಕ್ರಿ ಅನ್ನುವ ಸುಮಾರು 35 ವರ್ಷ ಪ್ರಾಯದ ಹೆಂಗಸು ಶನಿವಾರದಂದು ರಾತ್ರಿ 8 ರ ಸಮಯಕ್ಕೆ ಆ ಹೊಂಡಲ್ಲಿ ಬಿದ್ದು ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿದ್ದರು.
ಅವರು ಇಂದು ಬೆಳಿಗ್ಗೆ ಕೊನೆ ಉಸಿರು ಎಳೆದಿದ್ದಾರೆ ಎಂದು ವರದಿಯಾಗಿದೆ.
ಐ ಆರ್ ಬಿ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಶಾಹಿ ಧೋರಣೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.