March 26, 2024

Bhavana Tv

Its Your Channel

ಅವೈಜ್ಞಾನಿಕ ಚತುಷ್ಪತ ಕಾಮಗಾರಿ : ಹೊಂಡದಲ್ಲಿ ಬಿದ್ದು ಹಳದೀಪುರದ ಮಹಿಳೆ ಸಾವು

ಕುಮಟಾ : ತರಾತುರಿಯಲ್ಲಿ ಕಾಮಗಾರಿ 75% ಪೂರ್ಣವಾಗಿದೆ ಎಂದು ದಾಖಲಿಸಲು ಹೋಗಿ ಐ. ಆರ್. ಬಿಯ ಕಾಮಗಾರಿಯಿಂದ ಸಾಮಾನ್ಯ ಜನರು ಪ್ರಾಣ ಕಳೆದುಕೊಳ್ಳುವಂತೆ ಆಗಿದೆ.

ಹೌದು ಅವೈಜ್ಞಾನಿಕವಾಗಿ ರಸ್ತೆ ಪಕ್ಕದಲ್ಲಿ ಹೊಂಡ ತೋಡಿ, ರಾತ್ರಿ ಅದಕ್ಕೆ ಒಂದು ಸರಿಯಾದ ಭದ್ರತೆಯು ಒದಗಿಸದೆ ಹೋದ IRB ಯ ಸೋಗಲಾಡಿ ಅಧಿಕಾರಿಗಳ ವರ್ತನೆಗೆ, ಹಳದೀಪುರದ ಬಡ್ನಿಕೇರಿಯ ಲಕ್ಷ್ಮಿ ಕಣಿಯ ಮುಕ್ರಿ ಅನ್ನುವ ಸುಮಾರು 35 ವರ್ಷ ಪ್ರಾಯದ ಹೆಂಗಸು ಶನಿವಾರದಂದು ರಾತ್ರಿ 8 ರ ಸಮಯಕ್ಕೆ ಆ ಹೊಂಡಲ್ಲಿ ಬಿದ್ದು ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿದ್ದರು.

ಅವರು ಇಂದು ಬೆಳಿಗ್ಗೆ ಕೊನೆ ಉಸಿರು ಎಳೆದಿದ್ದಾರೆ ಎಂದು ವರದಿಯಾಗಿದೆ.

ಐ ಆರ್ ಬಿ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಶಾಹಿ ಧೋರಣೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

error: