April 26, 2024

Bhavana Tv

Its Your Channel

ಗುರುಸ್ಪಂದನ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ

ಕುಮಟಾ : ಬಿಇಓ ಕಾರ್ಯಾಲಯದಲ್ಲಿ ಸೋಮವಾರ ಗುರುಸ್ಪಂದನ ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿ ಶಿಕ್ಷಕರ, ಸಿಬ್ಬಂದಿಗಳ ಸೇವಾ ಪುಸ್ತಕದ ಅನಾವರಣಗೊಳಿಸಿದರು. ಬಿಇಓ ಕಾರ್ಯಾಲಯದ ಆವಾರದಲ್ಲಿ ತೆಂಗಿನ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು. ತಾಲೂಕಿನ ೭೪೪ ಪ್ರಾಥಮಿಕ ಶಾಲೆ ಶಿಕ್ಷಕರು, ೮೩ ಪ್ರೌಢಶಾಲೆ ಶಿಕ್ಷಕರು ಹಾಗೂ ನೂರಕ್ಕೂ ಹೆಚ್ಚು ಅನುದಾನಿತ ಶಾಲೆ ಶಿಕ್ಷಕರಿದ್ದು ಇವರೆಲ್ಲರೂ ಸೇರಿ ಕಲ್ಪವೃಕ್ಷ ಅಭಿಯಾನದಲ್ಲಿ ಸಾವಿರಾರು ಸಸಿ ಬೆಳೆಸಲಿದ್ದಾರೆ. ಡಿಡಿಪಿಐ ಹರೀಶ ಗಾಂವಕರ ಅಧ್ಯಕ್ಷತೆ ವಹಿಸಿದ್ದರು.

error: